ಚಾಮರಾಜನಗರ:ಇಂದು ವಿಶ್ವ ಆನೆ ದಿನಾಚರಣೆ. ಹಿನ್ನೆಲೆಯಲ್ಲಿ ಹುಲಿ ಯೋಜನೆ ವತಿಯಿಂದ ಆನೆ ದಿನ ಆಚರಿಸಲಾಯಿತು. ಚಾಮರಾಜನಗರದ ಬೂದಿಪಡಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಮಾತನಾಡಿ ರಾಜ್ಯದಲ್ಲಿ ಸು ೬೦೦೦ ಕ್ಕೂ ಆನೆಗಳಿವೆ ಎಂದರು.
ಇದರಿಂದ ಅರಣ್ಯ ಸಂವೃದ್ದಿಯೆಂದು ಸ್ಪಷ್ಟ. ವನ್ಯ ಪ್ರಾಣಿಗಳ ರಕ್ಷಣೆಯಲ್ಲಿ ಅರಣ್ಯ ಇಲಾಖೆ ಅತ್ಯುತ್ತಮ ಕಾರ್ಯ ನಿರ್ವಹಿಸಿದೆ. ಇತ್ತಿಚ್ಚಿನ ದಿನದಲ್ಲಿ ಮಾನವ ಆನೆ ಸಂಘರ್ಷ ಕೂಡ ಕಡಿಮೆಯಾಗಿದೆ. ಇದೇ ಸಂದರ್ಭದಲ್ಲಿ ವೈಲ್ಡ್ ಲೈಫ್ ಟ್ರಸ್ಟ್ ಇಂಡಿಯಾ ವತಿಯಿಂದ ಅರಣ್ಯ ಸಿಬ್ಬಂದಿಗಳಿಗೆ ಶೂ, ಬ್ಯಾಗ್ ವಿತರಿಸಲಾಗಿದೆ. ಕಾರ್ಯಕ್ರಮದಲ್ಲಿ ಡಿಸಿಎಫ್ ಸಂತೋಷ್ ಕುಮಾರ್, ಪುಣಜನೂರು ಅರಣ್ಯ ವಲಯ ಅಧಿಕಾರಿ ಕಾಂತರಾಜು ಉಪಸ್ಥಿತರಿದ್ದರು.