ಒಡೆಯದ ಈಡುಗಾಯಿ: ಗಲಿಬಿಲಿಗೊಂಡ ಕುಮಾರಣ್ಣ! ರೇಗಿದ ರೇವಣ್ಣ!!

ಒಡೆಯದ ಈಡುಗಾಯಿ: ಗಲಿಬಿಲಿಗೊಂಡ ಕುಮಾರಣ್ಣ! ರೇಗಿದ ರೇವಣ್ಣ!!

ಬೆಂಗಳೂರು, ಮಾ, 22, ನ್ಯೂಸ್ ಎಕ್ಸ್ ಪ್ರೆಸ್: ಇತ್ತೀಚೆಗೆ ತಾನೆ ಶೃಂಗೇರಿಯಲ್ಲಿ ಈಡುಗಾಯಿ ಒಡೆಯದ ಗಲಿಬಿಲಿಗೊಂಡ ಸಿಎಂ ಕುಮಾರಣ್ಣನ ಚಿತ್ರಗಳನ್ನು ಮಾಧ್ಯಮಗಳು ಎರ್ರಾಬಿರ್ರಿಯಾಗಿ ಬಿತ್ತರಿಸಿದವು.

ಇದೀಗ ಪ್ರಜ್ವಲ್ ನಾಮಪತ್ರಕ್ಕೂ ಮುನ್ನ ಅಂದ್ರೆ ಇಂದು ಬೆಳಗ್ಗಿನಿಂದಲೇ ಸಚಿವ ಎಚ್.ಡಿ ರೇವಣ್ಣ ಕುಟುಂಬ ಪೂಜೆ – ಪುನಸ್ಕಾರಗಳಲ್ಲಿ ತೊಡಗಿಕೊಂಡಿತ್ತು. ಪುತ್ರನ ನಾಮಪತ್ರದಲ್ಲೂ ವಾಸ್ತು ನೋಡಿ ಕ್ಷೇತ್ರ ಭೇಟಿ ಮಾಡುತ್ತಿದ್ದ ರೇವಣ್ಣ ಸಿಟ್ಟು ಮಾಡಿಕೊಂಡರು. ಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ನಡೆದ ಮೊದಲ ಪೂಜೆಯಲ್ಲಿ ಮಂಗಳಾರತಿ ಸರಿ ಆಗಿಲ್ಲ ಎಂದು ಮತ್ತೆ ದೇವಸ್ಥಾನಕ್ಕೆ ಹೋಗಿ ರೇವಣ್ಣ ಮತ್ತೊಮ್ಮೆ ಮಂಗಳಾರತಿ ಪಡೆದಿದ್ದಾರೆ. ಇತ್ತ ಹೊಳೆನರಸೀಪುರ ಲಕ್ಷ್ಮಿ ನರಸಿಂಹ ದೇಗುಲದಲ್ಲಿ ಎರಡೆರಡು ಬಾರಿ ರೇವಣ್ಣ, ಈಡುಗಾಯಿ ಒಡೆದಿದ್ದಾರೆ. ಪ್ರಜ್ವಲ್ ರೇವಣ್ಣ ಮೊದಲ ಪ್ರಯತ್ನದಲ್ಲಿ ಈಡುಗಾಯಿ ಒಡೆದರು. ರೇವಣ್ಣ ಮೊದಲ ಪ್ರಯತ್ನದಲ್ಲಿ ಈಡುಗಾಯಿ ಒಡೆದಿರಲಿಲ್ಲ. ಹೀಗಾಗಿ ಎರಡನೇ ಪ್ರಯತ್ನದಲ್ಲಿ ಈಡುಗಾಯಿ ಒಡೆದಿದ್ದಾರೆ. ಇದು ಖಂಡಿತ ಅಪಶಕುನ ಎಂದು ಬಲ್ಲವರು ಅಭಿಪ್ರಾಯಪಟ್ಟಿದ್ದಾರೆ…

ಫ್ರೆಶ್ ನ್ಯೂಸ್

Latest Posts

Featured Videos