ಚಿಕ್ಕಬಳ್ಳಾಪುರ: ಇಂದಿನಿಂದ ಗುಡಿಬಂಡೆಯ ಎಲ್ಲೊಡಿನಲ್ಲಿ ಡಿವೈಎಫ್ಐ ನಾಲ್ಕು ದಿನದ ರಾಜ್ಯಮಟ್ಟದ ಅಧ್ಯಯನ ಶಿಬಿರ ಚಾಲನೆಗೊಂಡಿದೆ.
ಖ್ಯಾತ ಚಲನಚಿತ್ರ ನಿರ್ದೇಶಕ,ನಟ ಹಾಗೂ ಜನಪರ ಚಿಂತಕ ಬಿ.ಸುರೇಶ್ ಉದ್ಘಾಟನಾ ನುಡಿಗಳನ್ನಾಡುವ ಮೂಲಕ ಚಾಲನೆ ನೀಡಿದರು.
ಡಿವೃಎಫ್ಐ ಸಂಸ್ಥಾಪಕ ಮುಖಂಡರಾದ ಕಾಮ್ರೇಡ್ ಜಿ.ವಿ ಶ್ರೀರಾಮರೆಡ್ಡಿ ಮತ್ತು ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾಂ.ಮುನೀರ್ ಕಾಟಿಪಳ್ಳ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.