ನವದೆಹಲಿ, ಮಾ.28, ನ್ಯೂಸ್ ಎಕ್ಸ್ ಪ್ರೆಸ್: ನಕ್ಸಲೀಯರು ನನ್ನೆ ತಡರಾತ್ರಿ ಡೈನಾಮೈ ಟ್ ಸ್ಫೋಟಗೊಳಿಸಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿರುವ ಬಿಜೆಪಿ ಮುಖಂಡರೊಬ್ಬರ ಮನೆಯನ್ನು ಧ್ವಂಸಗೊಳಿಸಿರುವ ಘಟನೆ ಬಿಹಾರದ ದುಮಾರಿಯಾದಲ್ಲಿ ನಡೆದಿದೆ.
ನಕ್ಸಲರು ಡೈನಾಮೆಟ್ ಬಳಸಿ ಅಂಜು ಕುಮಾರ್ ಸಿಂಗ್ ಮನೆ ಮೇಲೆ ದಾಳಿ ನಡೆಸಿದ್ದರಿಂದ ಮನೆ ಧ್ವಂಸಗೊಂಡಿರುವುದಾಗಿ ಎಎನ್ ಐ ವರದಿ ಮಾಡಿದೆ. ಮನೆಯ ಎದುರುಭಾಗದ ಗೋಡೆ ಒಡೆದು ಹೋಗಿದೆ.
ಘಟನೆಯಲ್ಲಿ ಮಾಜಿ ಎಂಎಲ್ ಸಿ ಅಂಜು ಕುಮಾರ್ ಗಾಯಗೊಂಡಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಡೈನಾಮೆಟ್ ಸ್ಫೋಟಗೊಂಡು ಮನೆ ಧ್ವಂಸಗೊಂಡ ನಂತರ ಮನೆಯ ಗೋಡೆಗೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲೇಬೇಕೆಂಬ ಪೋಸ್ಟರ್ ಅನ್ನು ಅಂಟಿಸಿರುವುದಾಗಿ ವರದಿ ಹೇಳಿದೆ. ಘಟನೆ ಬಗ್ಗೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.