ರಾಮನಗರ, ನ. 27: ರಾಜ್ಯದ ಮತದಾರರನ್ನು ಅಂಡರ್ ಎಸ್ಟಿಮೇಟ್ ಮಾಡಲು ಆಗುವುದಿಲ್ಲ, ಯಾರು ಮಾತೃಭೂಮಿಗೆ ಹಾಗೂ ಮಾತೃಪಕ್ಷಕ್ಕೆ ಮೋಸ ಮಾಡಿದ್ದಾರೆಯೋ ಅವರಿಗೆಲ್ಲ ಮತದಾರರು ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರ ವಿರುದ್ಧ ಹರಿಹಾಯ್ದರು. ತಾವು ಈಗಾಗಲೇ ಹೊಸಕೋಟೆಗೆ ಹೋಗಿದ್ದೆ, ಹುಣಸೂರಿಗೆ ತೆರಳುತ್ತಿದ್ದೇನೆ, ಆ ಬಳಿಕ ಕೆ.ಆರ್.ಪೇಟೆಗೂ ಹೋಗಿ ಪ್ರಚಾರ ಮಾಡುವುದಾಗಿ ಹೇಳಿದರು. ಇನ್ನು ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ, ಹಾಗೂ ಬೆಂಗಳೂರಿನ 4 ಕ್ಷೇತ್ರದಲ್ಲೂ ಪ್ರಚಾರ ಮಾಡುವೆ. ನಂತರದಲ್ಲಿ ರಾಣಿಬೆನ್ನೂರು ಮತ್ತು ಹೀರೆಕೆರೂರಿಗೆ ಹೋಗುವುದಾಗಿ ಸ್ಪಷ್ಟಪಡಿಸಿದರು.