ಬೆಂಗಳೂರು , ಮೇ. 14, ನ್ಯೂಸ್ ಎಕ್ಸ್ ಪ್ರೆಸ್ : ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರೋ ನಟ. ಶಿವಣ್ಣರ ‘ದ್ರೋಣ’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ‘ದ್ರೋಣ ಚಿತ್ರದಲ್ಲಿ ಶಿವಣ್ಣ ಡಿಫ್ರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆ ಕುರಿತ ಸಿನಿಮಾ ಇದಾಗಿದ್ದು, ಶಿವರಾಜ್ಕುಮಾರ್ ಮೊದಲ ಬಾರಿಗೆ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕಿಯಾಗಿ ನಟಿ ಇನಿಯಾ
ಕೆಲ ದಿನಗಳ ಹಿಂದೆ ಶಿವಣ್ಣ ನಟನೆಯ ‘ಕವಚ’ ತೆರೆಗೆ ಬಂದಿತ್ತು. ಜೂನ್ 14ರಂದು ಅವರ ‘ರುಸ್ತುಂ’ ತೆರೆಕಾಣುವ ಸೂಚನೆ ನೀಡಿದೆ. ಈಗ ‘ದ್ರೋಣ’ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಅತ್ತ ‘ಆನಂದ್’ ಸಿನಿಮಾದ ಕೆಲಸಗಳು ಬಹುತೇಕ ಕೊನೇ ಹಂತ ತಲುಪಿವೆ. ‘ದ್ರೋಣ’ಗೆ ಪ್ರಮೋದ್ ಚಕ್ರವರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೆ.ಎಸ್. ವಾಲಿ ಛಾಯಾಗ್ರಹಣ ಮಾಡಿದ್ದರೆ, ರಾಮ್ ಕ್ರಿಷ್ ಸಂಗೀತ ಸಂಯೋಜಿಸಿದ್ದಾರೆ. ಶಿವರಾಜ್ಕುಮಾರ್ಗೆ ನಾಯಕಿಯಾಗಿ ಬಹುಭಾಷಾ ನಟಿ ಇನಿಯಾ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಸ್ವಾತಿ ಶರ್ವ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ರೇಖಾ ದಾಸ್, ರವಿಕಿಶನ್ ಬಣ್ಣ ಹಚ್ಚಿದ್ದಾರೆ.