ಪೀಣ್ಯ ದಾಸರಹಳ್ಳಿ: ಮಲ್ಲಸಂದ್ರ ವಾರ್ಡ್ನ ವಿವಿಧ ಕಡೆಗಳಲ್ಲಿ 10 ಕೋಟಿ ವೆಚ್ಚದ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಪಾಲಿಕೆ ಸದಸ್ಯ ಎನ್. ಲೋಕೇಶ್ ಹಾಗೂ ನಾಮನಿರ್ದೇಶಿತ ಪಾಲಿಕೆ ಸದಸ್ಯ ಟಿ.ಎಸ್. ಗಂಗರಾಜು ಇತರ ಬಿಜೆಪಿ ಮುಖಂಡರೊಂದಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಎನ್.ಲೋಕೇಶ್ 5 ವರ್ಷದ ಅವಧಿಯಲ್ಲಿ ಮಲ್ಲಸಂದ್ರ ವಾರ್ಡಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ನಿಮ್ಮಗಳ ಆಶೀರ್ವಾದ ಮುಂಬರುವ ಬಿಜೆಪಿ ಪಕ್ಷದ ಸದಸ್ಯರ ಮೇಲೆ ಸದಾ ಇರಲಿ ಎಂದ ಅವರು ನಾನು ಮಾಜಿ ಪಾಲಿಕೆ ಸದಸ್ಯನಾದರೂ ಕೂಡ ನನ್ನ ವಾರ್ಡಿನ ಪೈಪ್ಲೈನ್ನಲ್ಲಿ ಕಚೇರಿ ಮಾಡಿ ನಿಮ್ಮ ಏನೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇವೆ ಈಗಾಗಲೇ ಕಲ್ಯಾಣ ಯೋಜನೆ ಅನುದಾನದಲ್ಲಿ ಹೆಲ್ತ್ ಕಾರ್ಡ್, ಮನೆಗಳ ಪತ್ರ, ಮನೆ ಕಟ್ಟಲು ಅನುದಾನ, ವಿದ್ಯಾರ್ಥಿವೇತನ, ಮುಂತಾದ ಸಹಾಯಗಳನ್ನು ಮಾಡಿದ್ದು ನಿಮ್ಮಗಳ ಆಶೀರ್ವಾದದಿಂದ ಹಾಗೂ ಮುನಿರಾಜಣ್ಣನ ಆಶೀರ್ವಾದದಿಂದ ಎಂದರು.