ಅಭಿವೃದ್ಧಿ ಕಾಮಗಾರಿಗಳಿ ಚಾಲನೆ

ಅಭಿವೃದ್ಧಿ ಕಾಮಗಾರಿಗಳಿ ಚಾಲನೆ

ಹೊಸಕೋಟೆ:ತಾಲೂಕಿನ ನಂದಗುಡಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸುಮಾರು ಮೂರು ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು.
ತಾಲೂಕಿನ ನಂದಗುಡಿ ಹೋಬಳಿಯ ಗ್ರಾಮಗಳಾದ. ಗೋವಿಂದಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿ ಸಿದ್ದನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಾಣಗೊಂಡ ನೂತನ ಅಂಗನವಾಡಿ ಕಟ್ಟಡ ಕಾಂಕ್ರೀಟ್ ರಸ್ತೆ ಹಾಗೂ ಓ ಹೊಸಹಳ್ಳಿ ಗ್ರಾಮದಲ್ಲಿ ೧೦ ಲಕ್ಷಕ್ಕೂ ರೂಪಾಯಿಗಳಿಗೂ ಹೆಚ್ಚು ಗ್ರಾಮದ ಕಾಂಕ್ರೀಟ್ ರಸ್ತೆ ಚರಂಡಿ ಕಾಮಗಾರಿ ಹಾಗೂ ಬಡವರಿಗೆ ನಿವೇಶನ ಹಕ್ಕುಪತ್ರ ಹಾಗೂ ಈ ಸ್ವತ್ತು, ಬೈಲ್ ನರಸಾಪುರ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಹಾಗೂ ಕೊರಟಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಪೈಪ್ ಲೈನ್ ಉದ್ಘಾಟಿಸಿದ ಶಾಸಕ ಶರತ್ ಬಚ್ಚೇಗೌಡ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಭಾರತೀಯರೈಲ್ವೆ ಬೋರ್ಡಿನ ಸದಸ್ಯ ಗೋಪಾಲ್, ಎಪಿಎಂಸಿ ಅಧ್ಯಕ್ಷ ಧರ್ಮೇಶ್, ಎಸ್ ಎಫ್‌ಎಸ್‌ಸಿ ಅಧ್ಯಕ್ಷ ಮಂಜುನಾಥ್, ಸಿಡಿಪಿಒ ಮೋಹನ್ ಕುಮಾರ್, ಮಂಜು ಗೌಡ, ಸ್ವಾಭಿಮಾನಿ ಪಕ್ಷದ ಮುಖಂಡ ತಾಲೂಕ್ ಪಂಚಾಯಿತಿ ಸದಸ್ಯ ಮನ್ಸೂರ್, ಬಿವಿ ರಾಜಶೇಖರಗೌಡ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಅಲಿ ಖಾನ್, ಅಯಬು ಬೇಗ ಗ್ರಾಮ ಪಂಚಾಯಿತಿ ಅಧ್ಯಕ್ಷ ,ನಂದಗುಡಿ ಗ್ರಾಮ ಪಂಚಾಯಿತಿ ಸದಸ್ಯೆ ರೂಪಾ ಲಕ್ಷ್ಮೀನಾರಾಯಣ್, ಕೊರಟಿ ನಾರಾಯಣಸ್ವಾಮಿ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕರು ಎಡ ಕನಹಳ್ಳಿ ಮಂಜಣ್ಣ, ಕೊರಟಿ ಗ್ರಾಮದ ಯುವ ಮುಖಂಡ ಗುರು ಉಪಸ್ಥಿತರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos