ನೆಲಮಂಗಲ , ಅ. 5: ಗಂಡನಮನೆಯಿಂದ ವರದಕ್ಷಣೆಗಾಗಿ ಮಹಿಳೆ ಮೇಲೆ ಮಾರಾಣಂತಿಕ ಹಲ್ಲೆ ನಡೆದಿರುವ ಆರೋಪ ವ್ಯಕ್ತವಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಗಣೇಶನಗುಡಿಯ ಮಹಿಳೆ ಅಂಜಲಿ ಮತ್ತು ಕುಟುಂದಿಂದ, ಅಂಜಲಿ ಪತಿ ರಮೇಶ್ ಕುಟುಂಬದ ಮೇಲೆ ನೇರ ಆರೋಪ ಕೇಳಿಬಂದಿದೆ. ಅಂಜಲಿ ಮೂಲತಃ ಟಿ.ಬೇಗೂರು ನಿವಾಸಿಯಾಗಿದ್ದು, ಕಳೆದ 5 ವರ್ಷಗಳ ಹಿಂದೆ ಅಂಜಲಿ ಗಣೇಶನಗುಡಿ ರಮೇಶನ ಜೊತೆ ವಿವಾಹವಾಗಿದ್ದರು. ಇಬ್ಬರು ಹೆಣ್ಣು ಮಕ್ಕಳಿದ್ದರೂ, ಗಂಡು ಮಗು ಆಗಿಲ್ಲಾ ಹಾಗೂ ಹಣ ನೀಡುತ್ತಿಲ್ಲ ಎಂದು ರಮೇಶ್ ನ ತಂದೆ ಚಿಕ್ಕರಂಗಯ್ಯ, ತಾಯಿ ಮಂಜುಳಾ, ನಾದಿನಿ ತೇಜಸ್ವಿನಿ, ಮೈದಾ ಹೇಮಂತ್ ಕುಮಾರ್, ರಿಂದ ಅಂಜಲಿ ಮೇಲೆ ಗುಪ್ತಾಂಗ ಸೇರಿದಂತೆ, ಕೈ ಕಾಲು ಗಳ ಮೇಲೆ ಹಲ್ಲೆ ಮಾಡಿರುವುದು ಕಂಡುಬಂದಿದೆ.
ಇನ್ನೂ ಅಂಜಲಿ ಪೋಷಕರ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗುತ್ತಿಲ್ಲ ಎಂದು ಆರೋಪಿಸುತ್ಯಿದ್ಧಾರೆ ಈ ಘಟನೆಯೂ ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.