ಮುಂಬೈ, ಜು. 17 : ಅತೃಪ್ತ ಕಾಂಗ್ರೆಸ್ -ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ, ಮುಂಬೈನ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶಾಸಕರು ತಾವು ಸದನಕ್ಕೆ ಯಾರೇ ಮನವೊಲಿಸಿದರೂ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಬೈನಲ್ಲಿ ಅಜ್ಞಾತ ಸ್ಥಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅತೃಪ್ತ ಕಾಂಗ್ರೆಸ್-ಜೆಡಿಎಸ್ ಶಾಸಕರು, ವಿಶ್ವಾಸಮತಕ್ಕೆ ನಾವು ಬರುವುದಿಲ್ಲ. ಯಾರೇ ಮನವೊಲಿಸಿದರೂ ಬರೋಲ್ಲ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಮತ್ತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ವಿಶ್ವಾಸಮತ ಸಾಭೀತು ಪಡಿಸುವ ವೇಳೆ 16 ರಾಜೀನಾಮೆ ನೀಡಿರುವ ಶಾಸಕರು ಬಾರದೇ ಹೋದರೇ, ದೋಸ್ತಿ ಖತಂ ಆಗೋದು ಗ್ಯಾರಂಟಿ.