ಬೆಂಗಳೂರು, ಮಾ. 29, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಶಾಸಕರೊಬ್ಬರು ದೊಣ್ಣೆ ಹಿಡ್ಕಂಡು ನಿಂತ್ಕಳಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಜೆಡಿಎಸ್ ನವರನ್ನ ಹೆದರಿಸಬೇಕೆಂದು ಪ್ರಚೋದನೆ ನೀಡಿದ್ದಾರೆ. ಯಾವುದಕ್ಕೂ ಎದೆಗುಂದಬೇಡಿ ನಾನಿದಿನಿ ಎಂದ ಶಾಸಕ ಹೊಸ ವರಸೆ ತೆಗೆದಿದ್ದಾರೆ.
ಮಾಜಿ ಬಿಜೆಪಿ ಶಾಸಕ ಸುರೇಶ್ ಗೌಡನ ಹೊಸ ವರಸೆ ಇದಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಕಾರ್ಯಕರ್ತರ ಕುರಿತು ಮಾತನಾಡುವಾಗ ಶಾಸಕರ ಮಾತು ವಿವಾದಕ್ಕೆ ಕಾರಣವಾಗಿದೆ. ಜೆಡಿಎಸ್ ನವ್ರು ಕೌರವರಿದ್ದಾಗೆ,ಅವರ ವಿರುದ್ದ ಯುದ್ದ ಮಾಡಿ. ಕೃಷ್ಷ ಪರಮಾತ್ಮನ ಹಾಗೆ ನಿಮ್ಮ ರಕ್ಷಣೆಗೆ ನಾನಿದಿನಿ ಎಂದು ಅಭಯ ನೀಡಿದರು.
ಪ್ರಚಾರಕ್ಕೆ ಬಂದ ವೇಳೆ ಕಿರುಚಿ, ಡಕಾಯಿತ ಅಂತಾ ಘೋಷಣೆ ಕೂಗಿ ಎಂದರು.
ಕಳ್ಳರನ್ನ ತಂದು ದೇವೇಗೌಡ ಕ್ಷೇತ್ರಕ್ಕೆ ನಿಲ್ಲಿಸುತ್ತಾರೆ. ಲೂಟಿ ಮಾಡಿ ನಮಗೂ ಪಾಲು ಕೊಡಿ ಎಂದು ಗೌಡರು ಅವಕಾಶ ಕೊಡುತ್ತಾರೆ. ಕೊಳ್ಳೆ ಹೊಡೆದ ಹಣದಲ್ಲಿ ದೇವೇಗೌಡ್ರಿಗೂ ಪಾಲಿದೆಯಂತೆ. ಚುನಾವಣಾ ಪ್ರಚಾರಕ್ಕೆ ಬಂದ್ರೆ ಶಾಸಕ ಗೌರಿಶಂಕರ್ ಗೆ ಕಳ್ಳ ಎಂದು ಕೂಗಿ ಎಂದು ಪ್ರಚೋದನೆ ನೀಡಿದರು.