ಅಂಧ ವಿದ್ಯಾರ್ಥಿಗಳಿಗೆ ದಾನ

ಅಂಧ ವಿದ್ಯಾರ್ಥಿಗಳಿಗೆ ದಾನ

ಪೀಣ್ಯ ದಾಸರಹಳ್ಳಿ, ಅ. 28: ದೀಪಾವಳಿ ಹಬ್ಬದ ಪ್ರಯುಕ್ತವಾಗಿ ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆಯ ವತಿಯಿಂದ ಮತ್ತು ಕೇರ್ ಟೇಕ್ ಕಂಪನಿಯ ಕಾರ್ಮಿಕರ ವತಿಯಿಂದ ಸನ್ಮಾರ್ಗ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೇಬಲ್ಸ್  ನ 50ರಿಂದ 60 ಅಂಧ ವಿದ್ಯಾರ್ಥಿಗಳಿಗೆ ದಿನನಿತ್ಯ ಬಳಸುವ ಅಕ್ಕಿ, ಬೇಳೆ, ಸಕ್ಕರೆ, ಟೂತ್ ಪೇಸ್ಟ್, ಬ್ರಷ್, ಸೋಪು ಇನ್ನು ಮುಂತಾದ ವಸ್ತುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ ಶಂಕರ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಸಿದ್ದರಾಜು, ಕಾರ್ಮಿಕ ಘಟಕ ಅಧ್ಯಕ್ಷ ಮಹೇಶ್, ಆಟೋ ಘಟಕ ಅಧ್ಯಕ್ಷ ಮಧುಸೂದನ್. ದಾಸರಳ್ಳಿ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಇನ್ನು ಮುಂತಾದವರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos