ಪೀಣ್ಯ ದಾಸರಹಳ್ಳಿ, ಅ. 28: ದೀಪಾವಳಿ ಹಬ್ಬದ ಪ್ರಯುಕ್ತವಾಗಿ ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆಯ ವತಿಯಿಂದ ಮತ್ತು ಕೇರ್ ಟೇಕ್ ಕಂಪನಿಯ ಕಾರ್ಮಿಕರ ವತಿಯಿಂದ ಸನ್ಮಾರ್ಗ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೇಬಲ್ಸ್ ನ 50ರಿಂದ 60 ಅಂಧ ವಿದ್ಯಾರ್ಥಿಗಳಿಗೆ ದಿನನಿತ್ಯ ಬಳಸುವ ಅಕ್ಕಿ, ಬೇಳೆ, ಸಕ್ಕರೆ, ಟೂತ್ ಪೇಸ್ಟ್, ಬ್ರಷ್, ಸೋಪು ಇನ್ನು ಮುಂತಾದ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ ಶಂಕರ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಸಿದ್ದರಾಜು, ಕಾರ್ಮಿಕ ಘಟಕ ಅಧ್ಯಕ್ಷ ಮಹೇಶ್, ಆಟೋ ಘಟಕ ಅಧ್ಯಕ್ಷ ಮಧುಸೂದನ್. ದಾಸರಳ್ಳಿ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಇನ್ನು ಮುಂತಾದವರು ಇದ್ದರು.