ರಾಮನಗರ, ಅ.23 : ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ದೊರೆತಿರುವ ಹಿನ್ನಲೆ ಗೌರಮ್ಮ ಅವರು ನನ್ನ ಮಗ ಮನೆಗೆ ಬರ್ತಿದ್ದಾನೆ, ನನಗೆ ಅದೇ ಹಬ್ಬ ಎಂದಿದ್ದಾರೆ. ಕನಕಪುರ ತಾಲೂಕಿನ ಕೋಡಿಹಳ್ಳಿಯ ನಿವಾಸದಲ್ಲಿ ಮಾತನಾಡಿದ ಅವರು, ನನ್ನ ಮಗ ಶಿವಕುಮಾರ್ ಗೆ ಜಾಮೀನು ದೊರೆತಿರುವುದು ಸಂತಸ ತಂದಿದ್ದು, ಈ ಸಂದರ್ಭದಲ್ಲಿ ಬೇರೆ ಏನು ಹೇಳಲಾಗುತ್ತಿಲ್ಲ. ದೇವರಿಗೆ ಮಗ ಮನೆಗೆ ಬರುವಂತೆ ಬೇಡಿಕೊಂಡಿದ್ದೆ. ನನ್ನ ಮಗ ಮನೆಗೆ ಬರುತ್ತಿರುವುದೇ ಬಹುದೊಡ್ಡ ಹಬ್ಬ. ಈ ವೇಳೆ ಪಟಾಕಿ ಹೊಡಿಬೇಕಾಗಿಲ್ಲ, ಸಿಹಿ ತಿನ್ನಬೇಕಿಲ್ಲ ಎಂದರು.