ಡಿಕೆಶಿ ಪುತ್ರಿಗೆ ಸಮನ್ಸ ಜಾರಿ

ಡಿಕೆಶಿ ಪುತ್ರಿಗೆ ಸಮನ್ಸ ಜಾರಿ

ಬೆಂಗಳೂರು, ಸೆ. 11 : ಮಾಜಿ ಸಚಿವ ಡಿಕೆ ಶಿವಕುಮಾರ ವ್ಯವಹಾರಗಳ ಮೇಲೆ ಇಡಿ ಹದ್ದಿನ ಕಣ್ಣುಟ್ಟಿದೆ. ಈಗಾಗಲೇ ದಾಖಲೆ ಕಲೆ ಹಾಕಿರುವ ಇಡಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ ಹಿನ್ನಲೆ , ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವ್ಯವಹಾರ ಆರೋಪದ ಮೇಲೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾಗೆ ಇಡಿ ಸಮನ್ಸ್ ಜಾರಿ ಮಾಡಿ, ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಮನೆಗೆ ಮಂಗಳವಾರ ಅಪರಾಹ್ನ ಆಗಮಿಸಿದ ಇಡಿ ಅಧಿಕಾರಿಗಳು ಮನೆ ಬಾಗಿಲಿಗೆ ಸಮನ್ಸ್ ಪ್ರತಿ ಅಂಟಿಸಿ ಹಿಂದಿರುಗಿದ್ದರು. ಸೆ.12ರಂದು ಖುದ್ದು ಹಾಜರಾಗುವಂತೆ ಸೂಚಿಸಿದೆ. ಸೆ.13ರಂದು ಶಿವಕುಮಾರ್ ಅವರ ಇಡಿ ಕಸ್ಟಡಿ ಅಂತ್ಯವಾಗಲಿದೆ. ಆರ್ಥಿಕ ವ್ಯವಹಾರಗಳ ಪರಿಶೀಲನೆ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು.

ಫ್ರೆಶ್ ನ್ಯೂಸ್

Latest Posts

Featured Videos