ಅಭಿವೃದ್ಧಿಗಾಗಿ ದೇವೇಗೌಡರೊಂದಿಗೆ ಒಂದಾಗಿದ್ದೇವೆ: ಡಿ.ಕೆ.ಶಿವಕುಮಾರ್

ಅಭಿವೃದ್ಧಿಗಾಗಿ ದೇವೇಗೌಡರೊಂದಿಗೆ ಒಂದಾಗಿದ್ದೇವೆ: ಡಿ.ಕೆ.ಶಿವಕುಮಾರ್

ರಾಮನಗರ, ಮಾ, 26, ನ್ಯೂಸ್ ಎಕ್ಸ್ ಪ್ರೆಸ್:   ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ 33 ವರ್ಷಗಳ ಯುದ್ಧ ಮಾಡಿದ್ದೇನೆ. ಈಗ ಅಭಿವೃದ್ಧಿಗಾಗಿ ಒಂದಾಗಿದ್ದೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸಹೋದರ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ್ ವಿರುದ್ಧ ಅಲ್ಲ. ಇದು ದೇವೇಗೌಡರು ಹಾಗೂ ಪ್ರಧಾನಿ ಮೋದಿ ನಡುವಿನ ಚುನಾವಣೆ ಎಂದರು.

ಬಿಜೆಪಿಗರಷ್ಟೇ ಹಿಂದುಗಳಲ್ಲ, ನಾವು ಹಿಂದುಗಳೇ, ನಮ್ಮ ಮೈಯಲ್ಲೂ ಕೆಂಪು ರಕ್ತ ಹರಿಯುತ್ತಿದೆ. ನಮ್ಮ ಮೈಯಲ್ಲಿ ಬೆವರು ಬಂದರೆ, ಉಪ್ಪು ಬರುತ್ತದೆ. ಬಿಜೆಪಿಯವರ ಮನೆಯಲ್ಲೇನು ಸಕ್ಕರೆ ಬರುತ್ತಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos