ಇಂದು ರಾಜ್ಯಕ್ಕೆ ಡಿಕೆಶಿ ಆಗಮನ

ಇಂದು ರಾಜ್ಯಕ್ಕೆ ಡಿಕೆಶಿ ಆಗಮನ

ಬೆಂಗಳೂರು, ಅ. 26: ರಾಜ್ಯಕ್ಕೆ ಬಹುದಿನಗಳ ನಂತರ ಮತ್ತೆ ವಾಪಸ್ಸಾಗುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಭರ್ಜರಿ ಸ್ವಾಗತ ಕೋರಲು ಈಗಾಗಲೇ ಕರ್ನಾಟಕ ಕಾಂಗ್ರೆಸ್ ಅದ್ಧೂರಿ ತಯಾರಿಗಳನ್ನ ಮಾಡಿಕೊಳ್ಳುತ್ತಿದೆ. ತಿಹಾರ್ ಜೈಲಿನಿಂದ ಮುಕ್ತಿ ಪಡೆದು 3 ದಿನಗಳ ಬಳಿಕ, ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ 02:30ರ ವೇಳೆಗೆ ಡಿಕೆಶಿ ಬೆಂಗಳೂರು ಏರ್ಪೋರ್ಟ್ ಗೆ ಬಂದಿಳಿಯಲಿದ್ದಾರೆ.

ಡಿಕೆಶಿಗೆ ಗ್ರ್ಯಾಂಡ್ ವೆಲ್ಕಮ್ ಮಾಡಲು, ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಕಾಂಗ್ರೆಸ್ ಕಾರ್ಯಕರ್ತರು, ಒಕ್ಕಲಿಗ ಸಮುದಾಯದವರು ಹಾಗೂ ಡಿಕೆಶಿ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಒಂದುಗೂಡಿ, ಅವರನ್ನ ರಾಜ್ಯಕ್ಕೆ ಸ್ವಾಗತಿಸಲಿದ್ದಾರೆ. ಮೂಲಗಳ ಪ್ರಕಾರ, ಡಿ.ಕೆ.ಶಿ ಅವರನ್ನ ಏರ್ಪೋರ್ಟ್ನಿಂದ ಕೆಪಿಸಿಸಿ ಕಚೇರಿಯವರೆಗೂ ತೆರೆದ ಜೀಪ್ನಲ್ಲಿ ಕರೆತರಲು ಪ್ಲಾನ್ ಮಾಡಲಾಗಿದೆ. ಇದರ ಜೊತೆಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಬೈಕ್ ರ‍್ಯಾಲಿ ಕೂಡ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಮನಗರ, ಕನಕಪುರ, ಮಾಗಡಿ ಹಾಗೂ ಚನ್ನಪಟ್ಟಣ ಸೇರಿದಂತೆ ಹಲವೆಡೆಯಿಂದ ಡಿಕೆಎಸ್ ಬೆಂಬಲಿಗರು ಆಗಮಿಸುವ ಸಾಧ್ಯತೆ ಇದೆ.

 

ಫ್ರೆಶ್ ನ್ಯೂಸ್

Latest Posts

Featured Videos