ರಾಮನಗರ: ನಿನ್ನೆ ರಾಮನಗರದ ಹಾರೋಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಪ್ರಚಾರ ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಮೇಲೆ ವಾಗ್ದಾಳಿ ನಡೆಸಿದರು.
ತನಗೆ ಜನರ ನಾಡಿ ಮಿಡಿತ ಚೆನ್ನಾಗಿ ಅರ್ಥ ಆಗುತ್ತೆ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುತ್ತದೆ ಯಾರ ಜೊತೆಯೂ ಮೈತ್ರಿಗೆ ಕೈ ಚಾಚದೆ ಸ್ವತಂತ್ರವಾಗಿ ಸರ್ಕಾರ ರಚಿಸುತ್ತೇವೆ ನಮಗೆ 136 ಸೀಟು ಬರಲಿಲ್ಲವೇ ಎಂದು ಶಿವಕುಮಾರ ಕೇಳಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆದ್ದರೆ ಡಾ ಸಿಎನ್ ಮಂಜುನಾಥ್ ಕೇಂದ್ರದಲ್ಲಿ ಆರೋಗ್ಯ ಸಚಿವರಾಗುತ್ತಾರಂತೆ ಅಂತ ಹೇಳಿದಾಗ ಶಿವಕುಮಾರ್, ಅಯ್ಯೋ ಅಲ್ಲೊಬ್ಬರು ಕೃಷಿ ಸಚಿವರಾಗುತ್ತಿದ್ದಾರೆ, ಇಲ್ಲೊಬ್ಬರು ಅರೋಗ್ಯ ಮಂತ್ರಿ! ಅಸಲಿಗೆ ಇವರು ಗೆದ್ದರೆ ತಾನೆ ಮಿನಿಸ್ಟ್ರುಗಳಾಗೋದು ಎಂದು ಶಿವಕುಮಾರ್ ಹೇಳಿದರು. ದೇವೇಗೌಡ ಕುಟುಂಬದ ಜೊತೆ ತನಗೆ ಯಾವುದೇ ವೈರತ್ವ ಇಲ್ಲ, ಹಗೆತನ ಇದ್ದಿದ್ರೆ ಕುಮಾರಸ್ವಾಮಿಯನ್ನು ಕರೆದೊಯ್ದು ಮುಖ್ಯಮಂತ್ರಿ ಮಾಡುತ್ತಿರಲಿಲ್ಲ ಎಂದು ಶಿವಕುಮಾರ್ ಹೇಳಿದರು.