ನೆಲಮಂಗಲ, ಸೆ. 19: ಬುಕ್ ಸ್ಟೋರ್ ಒಂದರಲ್ಲಿ ಡಿಸ್ಕೋಂಟ್ ವಿಚಾರದಲ್ಲಿ ವಾರ್ ನಡೆದಿದೆ. ಹೌದು ಅಂಗಡಿ ಮಾಲೀಕ ಮತ್ತು ಯುವಕರ ನಡುವೆ ನಡೆದ ಮಾರಾಮಾರಿ ಇದು.
ಯಾಕ್ ಡಿಸ್ಕೊಂಟ್ ಕೊಟ್ತಾಯಿಲ್ಲ ಅನ್ನೋ ಯುವಕರು……ಅಯ್ಯೋ ಇಲ್ಲಪ್ಪಾ……ಡಿಸ್ಕೌಂಟ್ ಕೊಟ್ಟಿದ್ದೀನಿ ಅಂತಾ ಇರೋ ಅಂಗಡಿಯ ಮಾಲೀಕ…..ಇತ್ತ ಮಾತಿನಚಕಮಕಿ ಜೋರಾಗಿಯೇ ನಡೆದಿದೆ…..ಕೊನೆಗೆ ಯುವಕರ ಮಾತು ಅವಾಚ್ಯ ಶಬ್ಧಗಳತ್ತವೂ ತಿರುಗುತ್ತೆ. ಸಿಲಿಕಾನ್ ಸಿಟಿಯ ನೆಲಮಂಗಲದ ಸಿದ್ಧಲಿಂಗೇಶ್ವರ ಬುಕ್ ಸ್ಟೋರ್ ನಲ್ಲಿ ನಡೆದಿರುವ ಘಟನೆ.
ಮಾಲೀಕ ಮತ್ತು ಯುವಕರ ನಡುವೆ ಮಾತಿನಚಕಮಕಿ ನಡೆದು ದೊಡ್ಡಮಟ್ಟದಲ್ಲಿ ಗಲಾಟೆಯಾಗಿ ಪರಿವರ್ತನೆಯಾಗಿದೆ.
ಇನ್ನೂ ಹೀಗೆ ಗಲಾಟೆ ಮಾಡಿದ ಯುವಕರು ಪರಬಾಶಿಕರೆಂದು ತಿಳಿದುಬಂದಿದೆ. ಇತ್ತ ಈ ಗಲಾಟೆಯ ಸಂಪೂರ್ಣ ದೃಶ್ಯ ಬುಕ್ ಸ್ಟೋರ್ ಅಂಗಡಿಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧಿ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.