ದಿನೇಶ್ ಗುಂಡುರಾವ್ ನಾಲಿಗೆ ಬಿದ್ದೋಗಿದೆ: ಎಂಎಲ್ಸಿ ತೇಜಸ್ವಿನಿ

ದಿನೇಶ್ ಗುಂಡುರಾವ್ ನಾಲಿಗೆ ಬಿದ್ದೋಗಿದೆ: ಎಂಎಲ್ಸಿ ತೇಜಸ್ವಿನಿ

ಬೆಂಗಳೂರು: ದಿನೇಶ್ ಗುಂಡುರಾವ್ ಗೆ ಈಗ ನಾಲಿಗೆ ಬಿದ್ದೋಗಿದೆ. ಸಿದ್ದರಾಮಯ್ಯ ಮಹಿಳೆಗೆ ಮಾಡಿದ ಅವಮಾನವನ್ನು ದಿನೇಶ್ ಪ್ರಶ್ನೆ ಮಾಡಿಲ್ಲ ಎಂದು ಬಿಜೆಪಿ ಎಂ.ಎಲ್.ಸಿ ತೇಜಸ್ವಿನಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದು, ಇದೇ ವೇಳೆ ಮಾತನಾಡಿದ ಅವರು ದಿನೇಶ್ ಗುಂಡುರಾವ್ ತನ್ನ ಪಕ್ಷದಲ್ಲಿ ನಡೆಯುವ ತಪ್ಪುಗಳನ್ನು ಪ್ರಶ್ನೆ ಮಾಡುವುದಿಲ್ಲ ಆದರೆ ಬೇರೆ ಪಕ್ಷದವರ ತಪ್ಪಿನ ಬಗ್ಗೆ ಮಾತನಾಡುತ್ತಾರೆ ಎಂದರು.

ನಂತರ ಮಾತನಾಡಿದ ಅವರು, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಗ್ಗೆ ಹೇಳಬೇಕೆ ಅವರು ಕೇರಳದಲ್ಲಿ ಸರಿತಾ ನಾಯರ್ ರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಹೊತ್ತವರು ಇಂವರಿಂದ ಏನನ್ನು ನಿರೀಕ್ಷೆ ಮಾಡಬಹುದು ಎಂದು ವ್ಯಂಗ್ಯವಾಗಿ ಮಾತನಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos