ಮಾ.19, ನ್ಯೂಸ್ ಎಕ್ಸ್ ಪ್ರೆಸ್ : ದಿಲೀಪ್ ಪೊಡ್ಡ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ಈತ ಗಾರ್ಮೆಂಟ್ಸ್ ಒಂದರಲ್ಲಿ ಸೇಲ್ಸ್ಮೆನ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಮುಗಿಸಿ ಬರುವಾಗ ಅಂಗಡಿ ಎದುರು ಬ್ಯಾಗ್ ಒಂದು ಬಿದ್ದಿತ್ತು. ಅದನ್ನು ನೋಡಿದ ದಿಲೀಪ್ಗೆ ಕುತೂಹಲ ಹುಟ್ಟಿಕೊಂಡಿತ್ತು. ಆ ಬ್ಯಾಗ್ಅನ್ನು ಪ್ರತಿಯೊಬ್ಬರು ನೋಡುತ್ತಾ ಸಾಗುತ್ತಿದ್ದರೇ ಹೊರತು ಅದನ್ನು ಎತ್ತಿಕೊಳ್ಳುವ ದೈರ್ಯ ಮಾಡುತ್ತಿರಲಿಲ್ಲ. ದಿಲೀಪ್ ಧೈರ್ಯ ಮಾಡಿ ಬ್ಯಾಗ್ ಎತ್ತಿಕೊಂಡ. ಮನೆಗೆ ಬಂದು ಅದನ್ನು ತೆಗೆದು ನೋಡಿದಾಗ ಎರಡು ಸಾವಿರ ರೂಪಾಯಿ ನೋಟುಗಳ ಕಂತೆಯೇ ಇತ್ತು. ಬ್ಯಾಗ್ನಲ್ಲಿದ್ದ ಹಣ ಎಣಿಸಿದಾಗ ಅದರಲ್ಲಿ 10 ಲಕ್ಷ ರೂ. ಇರುವ ವಿಚಾರ ಬೆಳಕಿಗೆ ಬಂದಿತ್ತು. ಇದನ್ನು ನೋಡಿ ದಿಲೀಪ್ ಒಮ್ಮೆ ಆಶ್ಚರ್ತಚಿಕತನಾದ. ಈ ಹಣವನ್ನು ಜೇಬಿಗೆ ಇಳಿಸಿಕೊಳ್ಳುವ ಬದಲು, ಈ ವಿಚಾರವನ್ನು ಗಾರ್ಮೆಂಟ್ನ ಮಾಲೀಕನಿಗೆ ದಿಲೀಪ್ ತಿಳಿಸಿದ. ತನಗೆ ಸಿಕ್ಕ ಬ್ಯಾಗ್ ಅನ್ನು ಮಾಲೀಕನಿಗೆ ಮರಳಿಸಿದ್ದಾನೆ. “ದಿಲೀಪ್ ಅವರ ಪ್ರಾಮಾಣಿಕತೆ ಮೆಚ್ಚಿ ಬ್ಯಾಗ್ನ ಮಾಲೀಕರು ತುಂಬಾನೇ ಖುಷಿಪಟ್ಟಿದ್ದರು. ವಜ್ರದ ವ್ಯಾಪಾರಿ ಆಗಿರುವ ಅವರು, ದಿಲೀಪ್ಗೆ 2 ಲಕ್ಷ ರೂ. ಬಹುಮಾನ ನೀಡಿದರು,” ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ನಾನಾ ರೀತಿಯ ಕೊಡುಗೆಗಳಿಂದಾಗಿ ಆತನ ಪ್ರಾಮಾಣಿಕತೆಯಿಂದಾಗಿ ಆತ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ.