ದೇವೇಗೌಡರು ಸೋಲು ಖಚಿತ-ಬಿಎಸ್ ವೈ

ದೇವೇಗೌಡರು ಸೋಲು ಖಚಿತ-ಬಿಎಸ್ ವೈ

ಬೆಂಗಳೂರುಏ, 26, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನವರು, ತುಮಕೂರಲ್ಲಿ ದೇವೇಗೌಡರು, ಕೋಲಾರದಲ್ಲಿ  ಕೆ.ಹೆಚ್.ಮುನಿಯಪ್ಪ, ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲು ಖಚಿತ ಅಂತಾ ಭವಿಷ್ಯ ನುಡಿದಿದ್ದಾರೆ.

ಯಡಿಯೂರಪ್ಪ ಇಂದು ಬಿಜೆಪಿ ಲೋಕಸಭೆ ಅಭ್ಯರ್ಥಿಗಳ ಜೊತೆ ಸಭೆ ನಡೆಸಿದರು. ಕಾಂಗ್ರೆಸ್, ಜೆಡಿಎಸ್ ಘಟಾನುಘಟಿಗಳು ಹಿನ್ನಡೆ ಅನುಭವಿಸುವುದು ನಿಶ್ಚಿತ. ನಾನು ನಿಮ್ಮನ್ನು ಮೆಚ್ಚಿಸಲು ಈ ಮಾತುಗಳನ್ನು ಹೇಳುತ್ತಿಲ್ಲ. ಸರಿಯಾದ ಮಾಹಿತಿ ತೆಗೆದುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ ಅಂತಾ ಭವಿಷ್ಯ ನುಡಿದರು. ಬಿಎಸ್ ವೈ ಮಾತಿಗೆ ರಾಜ್ಯ ನಾಯಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಈಗಾಗಲೇ ರಾಜ್ಯ ರಾಜಕೀಯದಲ್ಲಿ ಗೊಂದಲಗಳು ಶುರುವಾಗಿದೆ. ಫಲಿತಾಂಶದ ಬಳಿಕ ಅದು ಉಲ್ಬಣಬಾಗಲಿದೆ. ಸದ್ಯ ಈಗ 2 ಉಪ ಚುನಾವಣೆ ಬಂದಿದೆ. ಕುಂದಗೋಳ, ಚಿಂಚೋಳಿ ನಾವು ಗೆಲ್ಲಲೇಬೇಕು. ಆಕಾಂಕ್ಷಿಗಳ ಹೆಸರನ್ನು ದೆಹಲಿಗೆ ಕಳಿಸಿದ್ದೇವೆ ಅಂತಾ ಹೇಳಿದರು

 

ಫ್ರೆಶ್ ನ್ಯೂಸ್

Latest Posts

Featured Videos