ದೇವೇಗೌಡರಿಂದ ಈಶ್ವರನಿಗೆ ಪೂಜೆ

  • In State
  • December 8, 2018
  • 214 Views
ದೇವೇಗೌಡರಿಂದ ಈಶ್ವರನಿಗೆ ಪೂಜೆ

ಹಾಸನ: ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು ತಮ್ಮ ಹುಟ್ಟೂರು ಹರದನಹಳ್ಳಿಯ ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಗುರುವಾರ ರಾತ್ರಿಯೇ ಹರದನಹಳ್ಳಿಗೆ ಪತ್ನಿ ಚನ್ನಮ್ಮ ಜೊತೆ ಆಗಮಿಸಿ ಪೂಜೆ ಸಲ್ಲಿಸಿದ್ದ ದೇವೇಗೌಡರು, ಹಾಸನಕ್ಕೆ ಬಂದು ತಂಗಿದ್ದರು. ಶುಕ್ರವಾರ ಬೆಳಗ್ಗೆ ಹರದನಹಳ್ಳಿಗೆ ತೆರಳಿ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ದೇವೇಗೌಡ ದಂಪತಿ ಬೆಂಗಳೂರಿನತ್ತ ಹೊರಟರು. ರೇವಣ್ಣ ಅವರು ಹೊಳೆನರಸೀಪುರದ ತಮ್ಮ ನಿವಾಸಕ್ಕೆ ಹೋದರು.

ಫ್ರೆಶ್ ನ್ಯೂಸ್

Latest Posts

Featured Videos