ಕಾಗದದ ಮತಪತ್ರ (ballot paper)ಕ್ಕಾಗಿ ದೇವೇಗೌಡರ ಹೋರಾಟ…

ಕಾಗದದ ಮತಪತ್ರ (ballot paper)ಕ್ಕಾಗಿ ದೇವೇಗೌಡರ ಹೋರಾಟ…

ಅಮರಾವತಿ, ಏ. 8, ನ್ಯೂಸ್ ಎಕ್ಸ್ ಪ್ರೆಸ್:  ಮಾಜಿ ಪ್ರಧಾನ ಮಂತ್ರಿ ಮತ್ತು ಜೆಡಿಎಸ್ ಮುಖ್ಯಸ್ಥ ದೇವೇಗೌಡ ಅವರು ಕಾಗದದ ಮತಪತ್ರಕ್ಕಾಗಿ (ballot paper) ಹೋರಾಟ ಮುಂದುವರೆಸಲಿದ್ದಾರೆ ಎಂದು ಹೇಳಿದರು. ಅವರು ಇಂದು ಇಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ಮೋದಿ ಸರ್ಕಾರ ದೇಶದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ನಿರ್ವೀಯಗೊಳಿಸುತ್ತಿದೆ ಎಂದು ಟೀಕಿಸಿದರು. ಈಗ ಬಿಜೆಪಿಯ ವಿರುದ್ಧ ನಮ್ಮ ಮೈತ್ರಿ ಕೂಟ ಪ್ರಬಲವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ರಾಜಕೀಯ ವಿರೋಧಿಗಳ ಮೇಲೆ ಐಟಿ ವಿಭಾಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚಂದ್ರಬಾಬು ಪ್ರಾದೇಶಿಕ ಪಕ್ಷಗಳನ್ನು ಒಂದೇ ವೇದಿಕೆಗೆ ತರುವಲ್ಲಿ ಸಫಲರಾಗಿದ್ದಾರೆ. ಆದ್ದರಿಂದ ಆಂಧ್ರಪ್ರದೇಶ ಅಭಿವೃದ್ಧಿಗಾಗಿ ಮತ್ತೊಂದು ಬಾರಿ ಚಂದ್ರಬಾಬು ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕೆಂದು ಜನರಲ್ಲಿ ಕೋರಿದರು. ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಅವರು ಅನೇಕ ನ್ಯಾಯಾಲಯಗಳಲ್ಲಿ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವಾಗ, ಚಂದ್ರಬಾಬು ಅವರು ರಾಜ್ಯದ ಅಭಿವೃದ್ಧಿಪರ ಕೆಲಸ ಮಾಡುತ್ತಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos