ದೇವರಾಜ್ ಆಚಾರ್ ಡಾಕ್ಟರೇಟ್ ಪದವಿ

ದೇವರಾಜ್ ಆಚಾರ್ ಡಾಕ್ಟರೇಟ್ ಪದವಿ

ಮಧುಗಿರಿ:ಭಾರತೀಯ ಕೃಷಿಕ ಸಮಾಜದ ಮಧುಗಿರಿ ತಾಲೂಕು ಆಧ್ಯಕ್ಷ ದೇವರಾಜ್ ಆಚಾರ್ ಅವರಿಗೆ ನ್ಯಾಷನಲ್ ಕಲ್ಚರಲ್ ಯೂನಿವರ್‌ಸಿಟಿ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ.

ತಾಲೂಕಿನ ಗ್ರಾಮದ ದೊಡ್ಡೇರಿ ಹೋಬಳಿ ಸಿಂಗಾವುತನಹಳ್ಳಿ ಗ್ರಾಮದ ದೇವರಾಜ್ ಆಚಾರ್ ಅವರ ಶಿಲ್ಪ ಕಲೆಯ ಸಾಧನೆಗೆ ಬೆಂಗಳೂರಿನ ಬಾರತೀಯ ವಿದ್ಯಾ ಭವನದಲ್ಲಿ ನ್ಯಾಷನಲ್ ವರ್ಚುಯಲ್ ಯೂನಿವರ್‌ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ಸಂಸ್ಥೆಯು ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಶಿಲ್ಪಿಯಾಗಿರುವ ಇವರು ವಿವಿಧ ರೀತಿಯ ಕಲೆಯನ್ನು ಮೈಗೂಡಿಸಿಕೊಂಡಿದ್ದು ಇದರ ಜತೆ ಹಲವು ಸಾಧನೆಗಳ ಜತೆ ರೈತ ಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದ ವೇದಬ್ರಹ್ಮ ಶ್ರೀ ನಾಲಿಂಗಾಚಾರ್ಯ, ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್, ಗೌರವಾಧ್ಯಕ್ಷ ಪುಟ್ಟರಾಜು, ಕಾರ್ಯಧ್ಯಕ್ಷ ಪಾಂಡುರಂಗ, ಖಜಾಂಚಿ ಧನಂಜಯ, ವಿಶ್ವಮೂರ್ತಿ, ಸಿದ್ದಪ್ಪ ಅಭಿನಂದಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos