ಬಂಟ್ವಾಳ, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : ಕಿಡಿಗೇಡಿಗಳು ಕಲ್ಲು ಎಸೆದು ಕಾರಣ ಕ್ರೈಸ್ತ ದೇವರ ಮೂರ್ತಿಯ ಗ್ರೋಟ್ಟೊವಿನ ಹೊರಗಿನ ಗಾಜು ಪುಡಿಯಾಗಿದೆ. ಕಿಡಿಗೇಡಿಗಳ ವಿರುದ್ಧ ಕೂಡಲೇ ಪೊಲೀಸರು ಕ್ರಮಕೈಗೊಳ್ಳಬೇಕೆಂದು ಚರ್ಚ್ ಧರ್ಮಗುರು ಆಗ್ರಹಿಸಿದ್ದಾರೆ.
ವಿಟ್ಲ ಸಮೀಪದ ಪುಣಚ ತೋರಣಕಟ್ಟೆ ರಸ್ತೆಯ ಮನೇಲ ಕ್ರಿಸ್ತರಾಜ ದೇವಾಲಯಕ್ಕೆ ಸೇರಿದ ಕ್ರೈಸ್ತ ದೇವರ ಮೂರ್ತಿಯ ಗ್ರೋಟ್ಟೊವನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆಎಂದು ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಮಾಹಿತಿ ಪಡೆದ್ದು, ವಿಟ್ಲ ಠಾಣಾಧಿಕಾರಿ ಯಲ್ಲಪ್ಪ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.