ದ್ವಿಚಕ್ರ ಕಳ್ಳನ ಬಂಧನ

ದ್ವಿಚಕ್ರ ಕಳ್ಳನ ಬಂಧನ

ಬೆಂಗಳೂರು, ಅ. 25: ಮಹಾ ನಗರಗಳಲ್ಲಿ ನೂರು ರೂಪಾಯಿಗೆ ಕೊಲೆ ನಡೆದ ಉದಾಹರಣೆಗಳಿವೆ. ಅದೇ ರೀತಿ ನಗರದಲ್ಲಿ ಎರಡು-ಮೂರು ಸಾವಿರ ರೂಪಾಯಿಗಾಗಿ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಕಳ್ಳನನ್ನು ಬಂಧಿಸಲಾಗಿದೆ.

ಸಚ್ಚಿದಾನಂದ ಅಲಿಯಾಸ್ ಸಚ್ಚಿ ಬಂಧಿತ ಆರೋಪಿ. ಮೊದಲು ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಕೀ ಇಲ್ಲದೆಯೇ ಬೈಕ್ ಸ್ಟಾರ್ಟ್ ಮಾಡುವ ಕಲೆ ಸಚ್ಚಿದಾನಂದನಿಗೆ ಕರಗತವಾಗಿತ್ತು.

ಬೇರೆ ಉದ್ಯೋಗಕ್ಕಾಗಿ ಬೆಂಗಳೂರಿನ ಮೂಲೆ ಮೂಲೆ ತಿರುಗಿದರೂ ಸಚ್ಚಿದಾನಂದನಿಗೆ ಉದ್ಯೋಗ ಸಿಗಲೇ ಇಲ್ಲ. ಹೀಗಾಗಿ ಕಳ್ಳತನದ ದಾರಿ ಹಿಡಿದಿದ್ದ. ಬೈಕ್ ಡೈರೆಕ್ಟ್ ಮಾಡಿ ಕದಿಯುತ್ತಿದ್ದ. ಹಣದ ಅವಶ್ಯಕತೆ ಇದೆ ಎಂದು 2-3 ಸಾವಿರಕ್ಕೆ ಕದ್ದ ಬೈಕನ್ನು ಮಾರಾಟ ಮಾಡುತ್ತಿದ್ದ.

ಬಂಧಿತನಿಂದ 4 ಲಕ್ಷ 3೦ ಸಾವಿರ ಮೌಲ್ಯದ 7 ದ್ವಿಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಬೈಕ್‌ಗಳನ್ನು ‍ಯಾರ ಯಾರಿಗೆ ಮಾರಿದ್ದಾನೆ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos