ಕಿಡಿಗೇಡಿಗಳಿಂದ ಸಂಪಿಗೆ ನಾಶ

ಕಿಡಿಗೇಡಿಗಳಿಂದ ಸಂಪಿಗೆ ನಾಶ

ದೇವನಹಳ್ಳಿ, ನ. 29 : ವರ್ಷದಿಂದ ಕಷ್ಟ ಪಟ್ಟು ಬೆಳೆಸಿದ ಸಂಪಿಗೆ ಮರಗಳನ್ನು ಹಾಳು ಮಾಡಿದವರಿಗೆ ಕಾನೂನು ರಿತ್ಯ ಕ್ರಮ ಜರುಗಿಸಬೇಕು ಎಂದು ದೂರಿದರು.
ತಾಲ್ಲೂಕಿನ ಕಸಬಾ ಹೋಬಳಿ ಸಣ್ಣೆ ಅಮಾನಿಕೆರೆ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಸಂಪಿಗೆ ಮರಗಳನ್ನು ಕಿಡಿಗೇಡಿಗಳು ನಾಶ ಮಾಡಿದ್ದು, ರೈತ ಜಿ.ಕೆ.ವೆಂಕಟೇಶ್ ಕಂಗಾಲಾಗಿದ್ದಾರೆ. ಸಣ್ಣೆ ಅಮಾನಿಕೆರೆ ಗ್ರಾಮದ ಸರ್ವೆ ನಂ. 131/4 ರ 20 ಗುಂಟೆ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡಿದ್ದು , ಇದರಲ್ಲಿ 100ಕ್ಕೂ ಹೆಚ್ಚು ಸಂಪಿಗೆ ಮರಗಳನ್ನು 8ವರ್ಷದ ಹಿಂದೆ ನೆಡಸಲಾಗಿತ್ತು.
ಈಗ ತಾನೆ ಹೂವುಗಳನ್ನು ಬಿಡುತಿದ್ದ ವೇಳೆ ಕಿಡಿಗೇಡಿಗಳು ಪಸಲಿಗೆ ಬಂದಿದ್ದ ಮರಗಳನ್ನು ನಾಶ ಮಾಡಿದ್ದಾರೆ ಎಂದು ವೆಂಕಟೇಶ್ ದೂರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos