ದೇಣಿಗೆ ನೀಡಿದವರ ಹೆಸರನ್ನ ಬಡಾವಣೆಗೆ ಇಡಲಾಗುವುದು

ದೇಣಿಗೆ ನೀಡಿದವರ ಹೆಸರನ್ನ ಬಡಾವಣೆಗೆ ಇಡಲಾಗುವುದು

ಬೆಂಗಳೂರು, ಆ. 16: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಿಂದಾಗಿ ಜನ ಜೀವನ ಕಂಗಾಲಾಗಿದೆ. ಹೌದು, ಪ್ರವಾಹ ಪೀಡಿತ ಪ್ರದೇಶಗಳ ಪುನಶ್ಚೇತನಕ್ಕೆ 10 ಕೋಟಿ ನೀಡಿದ ದಾನಿಗಳ ಹೆಸರನ್ನು ಗ್ರಾಮಕ್ಕೆ ಇಡುವ  ಕುರಿತ ಸಿಎಂ ನಿರ್ಧಾರಕ್ಕೆ ವ್ಯಾಪಕ ಟೀಕೆ ಕೇಳಿ ಬಂದ ಹಿನ್ನೆಲೆ ಯಡಿಯೂರಪ್ಪ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗ್ರಾಮಗಳ ಹೆಸರನ್ನು ಬದಲಾಯಿಸುವ ಕುರಿತು ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಬದಲಾಗಿ ದೇಣಿಗೆ ನೀಡಿದವರ ಹೆಸರನ್ನು ಆ ಗ್ರಾಮಗಳ ಬಡಾವಣೆಗೆ ಇಡಲಾಗುವುದು ಎಂದು ಅವರು  ಯೂ ಟರ್ನ್ ಹೊಡೆದಿದ್ದಾರೆ.

ರಾಜ್ಯದ ಮುಕ್ಕಾಲು ರಾಜ್ಯ ಪ್ರವಾಹಕ್ಕೆ ಒಳಗಾಗಿದ್ದು, ಇವುಗಳ ಮರುನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬೇಕಾಗಿದೆ. ಈ ಹಿನ್ನೆಲೆ ಸಾರ್ವಜನಿಕ ಉದ್ಯಮಿ ಹಾಗೂ ಕೈಗಾರಿಕೋದ್ಯಮಗಳು ದೇಣಿಗೆ ಆಹ್ವಾನಿಸಿ ಮಾತನಾಡಿದ್ದ ಅವರು, 10 ಕೋಟಿಗೂ ಹೆಚ್ಚಿಗೆ ದೇಣಿಗೆ ನೀಡಿದ ದಾನಿ, ಸಂಸ್ಥೆಗಳ ಹೆಸರನ್ನು ಪುನರ್ನಿರ್ಮಾಣಗೊಂಡ ನೆರೆ ಪೀಡಿತ ಗ್ರಾಮಗಳಿಗೆ ಇಡಲಾಗುವುದು ಎಂದಿದ್ದರು.

ಮುಖ್ಯಮಂತ್ರಿಗಳ ಈ ನಿರ್ಧಾರಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗಿತ್ತು. ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರು ಈಗ ಸಿಎಂ ಬಿಎಸ್ವೈ ತುಘಲಕ್ ನಿರ್ಧಾರದಿಂದಾಗಿ ತಮ್ಮ ಗ್ರಾಮದ ಹೆಸರನ್ನೂ ಕಳೆದುಕೊಳ್ಳುವಂತೆ ಆಗಿದೆ. ಈ ರೀತಿ ಮಾಡಬೇಡಿ. ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ ಎಂದು ಬಿಎಸ್ ವೈ ನಿರ್ಧಾರಕ್ಕೆ ಜೆಡಿಎಸ್ ತೀವ್ರ ಖಂಡನೆ ವ್ಯಕ್ತಪಡಿಸಿತು.

 

ಫ್ರೆಶ್ ನ್ಯೂಸ್

Latest Posts

Featured Videos