ದೆಹಲಿಯಲ್ಲಿ ಹದಗೆಟ್ಟ ವಾತವರಣ….!

ದೆಹಲಿಯಲ್ಲಿ ಹದಗೆಟ್ಟ ವಾತವರಣ….!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಯಲ್ಲಿ ಹೆಚ್ಚಾಗಿ ವಾತವರಣದಲ್ಲಿ ಏರು ಪೇರು ಆಗುವುದು. ಇದರಿಂದ ಅಲ್ಲಿಯ ಸರ್ಕಾರ ಮುಂಜಾಗೃಕತೆಯಿಂದ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ.

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿದು ಜನರು ಉಸಿರಾಡಲು ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಸತತ 4 ದಿನವೂ ಗಾಳಿಯ ಗುಣಮಟ್ಟ ಕಳಪೆ ಸ್ಥಿತಿಯಲ್ಲೇ ಮುಂದುವರೆದಿದೆ. ಮುಂದಿನ ಐದಾರು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಅಧ್ಯಯನ ಸಂಸ್ಥೆಗಳು ತಿಳಿಸಿವೆ.

ಮೇ ತಿಂಗಳ ಬಳಿಕ ಕಳೆದ ಭಾನುವಾರ ಕಳಪೆಗೆ ಕುಸಿದ ಗಾಳಿಯ ಗುಣಮಟ್ಟ ನಿನ್ನೆ ಇದೇ ಸ್ಥಿತಿಯಲ್ಲೇ ಮುಂದುವರೆದಿದೆ.

ಗಾಳಿಯ ಗುಣಮಟ್ಟ ಸೊನ್ನೆಯಿಂದ 50ರೊಳಗಿದ್ದರೆ ಅದನ್ನು ಉತ್ತಮ, 51ರಿಂದ 100 ಇದ್ದರೆ ಸಮಾಧಾನಕರ, 101ರಿಂದ 200 ಇದ್ದರೆ ಕಳಪೆ, 301ರಿಂದ 400 ಇದ್ದರೆ ಅತ್ಯಂತ ಕಳಪೆ ಮತ್ತು 401ರಿಂದ 500 ಇದ್ದರೆ ಅದನ್ನು ತೀವ್ರ ಎಂದು ಗುರುತಿಸಲಾಗುತ್ತದೆ.

ದಸರಾ ಹಬ್ಬದ ಪ್ರಯುಕ್ತ ನಗರದಲ್ಲಿ ಹಲವು ಪ್ರದೇಶಗಳಲ್ಲಿ ಪಟಾಕಿ ಸುಟ್ಟ ಕಾರಣ ವಾತಾವರಣ ಇಷ್ಟೊಂದು ಪ್ರಮಾಣದಲ್ಲಿ ಹದಗೆಟ್ಟಿದೆ. ಅಲ್ಲದೆ, ಪಂಜಾಬ್‌ ಹಾಗೂ ಹರ್ಯಾಣದಲ್ಲಿ ರೈತರು ಕಟಾವು ಮಾಡಿದ ಬೆಳೆ ತ್ಯಾಜ್ಯ ಸುಡುತ್ತಿದ್ದಾರೆ. ಇದು ಕೂಡ ಪರಿಸ್ಥಿತಿ ವಿಷಮಕ್ಕೆ ಕಾರಣವಾಗಿದೆ.

ಈ ನಡುವೆ, ಮುಂದಿನ ದಿನಗಳಲ್ಲಿ ದೀಪಾವಳಿ ಬರುವುದರಿಂದ ಈ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂಬ ಕಾರಣಕ್ಕೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವಂತೆ. ಪಟಾಕಿ ಮತ್ತು ಬೆಳೆಗಳನ್ನು ಸುಡದಂತೆ ಸೂಚನೆ ನೀಡಲಾಗಿದೆ. ಮೆಟ್ರೋ ರೈಲುಗಳ ಓಡಾಟವನ್ನು ಹೆಚ್ಚಳ ಮಾಡಿದ್ದು, ಸಾಧ್ಯವಾದಷ್ಟು ಕಡಿಮೆ ಸ್ವಂತ ವಾಹನ ಬಳಸಲು ಸೂಚನೆ ನೀಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos