ನವದೆಹಲಿ, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : ಒಂದು ಬಕೆಟ್ ನೀರು ಇಟ್ಟ ಕ್ಷುಲಕ ಕಾರಣಕ್ಕೆ ನೆರೆಮನೆಯ ಮಹಿಳೆಗೆ ಚಾಕು ಇರಿದು ಕೊಲೆಗೈದ ವಿಚಿತ್ರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ರಂಗಪುರಿ ಪಹಾರಿ ನಿವಾಸಿ ಆರೋಪಿ ಗೋಪಾಲ್ ಸಿಂಗ್ ಚಾಕು ಇರಿದ ವ್ಯಕ್ತಿ. ಶೌಚಾಲಯದ ಬಾಗಿಲ ಮುಂದೆ ರೇಖಾ ನೀರು ತುಂಬಿದ್ದ ಬಕೆಟ್ ಇಟ್ಟು ಹೋಗಿದ್ದಾರೆಂಬ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿ ಪದೆ ಪದೇ ನೆರೆಹೊರೆಯವರ ಜೊತೆ ಜಗಳಾವಾಡುತ್ತಿದ್ದ. ನೀರಿಗಾಗಿ ಟ್ಯಾಂಕ್ ಬಳಿಹೋಗಿ ಕೆಲ ದಿನಗಳಿಂದ ರೇಖಾ ಹೆಚ್ಚು ನೀರನ್ನು ಬಳಸುತ್ತಾರೆ ಎಂದು ಕ್ಯಾತೆ ತೆಗೆದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಈ ಘಟನೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ್ದಾರೆ.