ಕಲಬುರಗಿ, ನ.4 : ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ನಾಲ್ವರನ್ನು ಅಷ್ಟಗಿ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸೈಯದ್ ಅಬ್ದುಲ್, ಮೊಹಮದ್ ಯೂನಸ್, ಮೊಹಮದ್ ಸಲಾಂ, ಮೊಹಮದ್ ಶಾಕೀರ್ ಬಂಧಿತರು. ಇವರು ನಾಡಬಂದೂಕು ಬಳಸಿ ಜಿಂಕೆ ಬೇಟೆಯಾಡಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಬೆನ್ನುಹತ್ತಿದ್ದ ಅಷ್ಟಗಿ ಗ್ರಾಮಸ್ಥರು ಕಲಬುರಗಿ ಹೊರ ವಲಯದ ರಕ್ಷಿತ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ ಜಿಂಕೆಯನ್ನು ವಾಹನದಲ್ಲಿ ಸಾಗಿಸಲು ಮುಂದಾದ
ಆರೋಪಿಗಳನ್ನು ನೋಡಿದ ಗ್ರಾಮಸ್ಥರು ಅವರನ್ನು ಸುತ್ತುವರಿದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆರೋಪಿಗಳನ್ನು ಬಂಧಿಸಿ, ವಾಹನ, ಗನ್ ಹಾಗೂ ಜಿಂಕೆ ಶವವನ್ನು ವಶಕ್ಕೆ ಪಡೆದರು.
ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.