ಉತ್ತರ ಪ್ರದೇಶದ, ಮೇ. 8, ನ್ಯೂಸ್ ಎಕ್ಸ್ ಪ್ರೆಸ್: ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಒಂದಲ್ಲ ಒಂದು ಪವಾಡ ನಡಿತಾನೇ ಇರುತ್ತೆ ಹೌದು, ಉತ್ತರ ಪ್ರದೇಶದ ಕಾನ್ಪುರದ ಹಳ್ಳಿಯೊಂದರಲ್ಲಿ ಸತ್ತ ವ್ಯಕ್ತಿ ಓಬ್ಬ ಬದುಕಿ ಬಂದಿರುವ ಆಶ್ಚರ್ಯಕಾರಿ ಘಟನೆ ನಡೆದಿದೆ.
115 ವರ್ಷದ ಸಾಧುವೊಬ್ಬರು ಸಾವನ್ನಪ್ಪಿದ್ದರು. ಊರವರೆಲ್ಲ ಸೇರಿ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸಿದ್ದಾರೆ. ಆದರೆ ಸತ್ತ 4 ಗಂಟೆಯ ನಂತರ ಚಮತ್ಕಾರ ನಡೆದಿದೆ. ಸತ್ತ ಸಾಧು ಹೃದಯ ಬಡಿತ ಮತ್ತೆ ಶುರುವಾಗಿದೆ. ಇದನ್ನು ಕಂಡ ಗ್ರಾಮಸ್ಥರು ಖುಷಿಯಿಂದ ಕುಣಿದಾಡಿದ್ದಾರೆ.
ಸಾಧು ಹೆಸರು ನಾರಾಯಣ ಬಾಬಾ. 15 ರಿಂದ 20 ವರ್ಷಗಳ ಹಿಂದೆ ಗ್ರಾಮದ ದೇವಸ್ಥಾನಕ್ಕೆ ಸಾಧು ಬಂದಿದ್ದರಂತೆ. ಆ ನಂತರ ಇಲ್ಲಿಯೇ ವಾಸ ಶುರು ಮಾಡಿದ್ದರು. ಅನೇಕ ವರ್ಷಗಳಿಂದ ಅನ್ನ ತ್ಯಜಿಸಿರುವ ಸಾಧು, ಹಣ್ಣನ್ನು ಮಾತ್ರ ಸೇವನೆ ಮಾಡುತ್ತಿದ್ದರಂತೆ. ಅವರ ವಯಸ್ಸು ಅವರಿಗೆ ಸರಿಯಾಗಿ ತಿಳಿದಿಲ್ಲ. ಕೆಲವರು ಸಾಧು ವಯಸ್ಸು 120 ಎನ್ನುತ್ತಾರೆ. ಸತ್ತ ಕೆಲ ಗಂಟೆಯಲ್ಲಿ ಮತ್ತೆ ಎದ್ದು ಬಂದ ಸಾಧು ನೋಡಲು ಬೇರೆ ಊರುಗಳಿಂದಲೂ ಜನ ಬರುತ್ತಿದ್ದಾರೆ.