ರಾಯಚೂರು, ಅ. 11 : ಗುರುವಾರ ರಾತ್ರಿ ಸಿಡಿಲು ಬಡಿದು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ವಂದಲಿ ಹಾಗೂ ಬಗಡಿ ತಾಂಡಾದಲ್ಲಿ ಜಾನುವಾರು ಮತ್ತು ಮೇಕೆಗಳು ಸಾವನ್ನಪ್ಪಿವೆ. ಬಾರಿ ಮಳೆ ಮತ್ತು ಸಿಡಿಲಿಗೆ ಹಸು, ಎಮ್ಮೆ ಹಾಗೂ 30 ಮೇಕೆಗಳು ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಗಡಿ ತಾಂಡಾದಲ್ಲಿ ಗುರುವಾರ ರಾತ್ರಿ ಸಿಡಿಲು ಬಡಿದು ಈರಣ್ಣ, ನಾರಾಯಣ ಪೂಜಾರಿ ಎಂಬುವವರ ಹಸು, ಎಮ್ಮೆ ಸಾವನ್ನಪ್ಪಿದ್ದಾವೆ.