ಬಾಗಲಕೋಟೆ, ನ. 4 : ರಾತ್ರಿ ಮಲಗಿದ್ದವನನ್ನು ಫೋನ್ ಮಾಡಿ ಎಬ್ಬಿಸಿ ಡಿಸಿಎಂ ಸ್ಥಾನ ಕೊಟ್ಟರು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಭಾನುವಾರ ರಾತ್ರಿ ರಬಕವಿ-ಬನಹಟ್ಟಿ ತಾಲೂಕಿನ ಹಳಂಗಳಿ ಭದ್ರಗಿರಿ ಬೆಟ್ಟದ ದೀಪೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಸವದಿ ಹೇಳಿಕೆ ನೀಡಿ, ನಾನು ಮಂತ್ರಿ ಆಗಬೇಕು ಎಂದು ಆಸೆ ಪಟ್ಟಿರಲಿಲ್ಲ. ನಾನು ಮಂತ್ರಿ ಆಗುತ್ತೇನೆ ಅಂತನೂ ಗೊತ್ತಿರಲಿಲ್ಲ. ಆದರೆ ತಡರಾತ್ರಿ ಎರಡು ಗಂಟೆಗೆ ಫೋನ್ ಮಾಡಿ ಎಬ್ಬಿಸಿ ಮಂತ್ರಿ ಮಾಡಿದರು ಎಂದು ತಿಳಿಸಿದರು.
ಲಕ್ಷ್ಮಣ ಸವದಿ ಹಿಂದಿನ ಚುನಾವಣೆಯಲ್ಲಿ ಸೋತಿದ್ದರು ಅನೇಕರು ಹೇಳುತ್ತಾರೆ. ಸೋತೋರು ಹೇಗೆ ಮಂತ್ರಿ, ಉಪಮುಖ್ಯಮಂತ್ರಿ ಆದರು ಎಂದು ಅನೇಕರು ಆಶ್ಚರ್ಯವನ್ನೂ ಪಟ್ಟಿದ್ದರು.