ಬೆಳಗಾವಿ, ಅ. 4 : ನೆರೆ ಸಂತ್ರಸ್ಥರ ವಿಚಾರವಾಗಿ ನೆರೆ ಪರಿಹಾರ ಕೇಳಲು ಹೋದ ರೈತರಿಗೆ ಜನ ಪ್ರತಿನಿಧಿಗಳೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಡಿಸಿಸಿಎಂ ಲಕ್ಷ್ಮಣ ಸವದಿ ಉಡಾಫೆ ಉತ್ತರ ನೀಡಿ, ನೆರೆ ಪರಿಹಾರ ಕೇಳಲು ಹೋದ ರೈತರಿಗೆ ನನ್ನದು ನೂರು ಎಕರೆ ಜಮೀನು ಇದೆ, ಅಷ್ಟಕ್ಕೂ ಪರಿಹಾರ ನೀಡಿದರೆ ಒಂದು ಕೋಟಿ ಆಗುತ್ತೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಪ್ರವಾಹ ಪರಿಹಾರ ವಿತರಣೆ ಪರಿಶೀಲನೆ ಸಭೆಗೆ ಬಂದಿದ್ದ ರೈತರು ಪರಿಹಾರ ಎಕರೆಗೆ ಐವತ್ತು ಸಾವಿರದಿಂದ ಒಂದು ಲಕ್ಷ ಹೆಚ್ಚಿಸುವಂತೆ ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯ ಮಾಡಿದ್ದಾರೆ.
ಸಿಎಂ ಅವರ ಉತ್ತರಕ್ಕೆ ಆಕ್ರೋಶಗೊಂಡ ರೈತ ಮುಖಂಡರು ವಿರೋಧ ಮಾಡಿದಾಗ ಅಡ್ಡ ಬಂದ ಡಿಸಿಎಂ ಲಕ್ಷ್ಮಣ ಸವದಿ, ನನ್ನದು ನೂರು ಎಕರೆ ಜಮೀನು ಇದೆ. ಅಷ್ಟಕ್ಕೂ ಪರಿಹಾರ ನೀಡಿದರೆ ಒಂದು ಕೋಟಿ ಆಗುತ್ತೆ ಎಂದು ಉಡಾಪೆ ಉತ್ತರ ನೀಡಿದ್ದಾರೆ