ಅಹಮದಾಬಾದ್, ಅ. 28 : ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ವಾಸ್ ಗುಜರಾತ್ನ ನರ್ಮದಾ ಜಿಲ್ಲೆಗೆ ಭೇಟಿ ನೀಡಿ ಏಕತಾ ಪ್ರತಿಮೆ ವೀಕ್ಷಿಸಿದರು.
ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭ್ ಬಾಯಿ ಪಟೇಲ್ ಅವರ ಸ್ಮರಣಾರ್ಥ ನಿರ್ಮಿಸಲಾದ ಕೆವಾಡಿಯಾ ಗ್ರಾಮದಲ್ಲಿ ನರ್ಮದಾ ನದಿಯ ತಟದಲ್ಲಿ ನಿರ್ಮಿಸಲಾಗಿರುವ, ಜಗತ್ತಿನ ಅತಿ ಎತ್ತರದ ಪ್ರತಿಮೆ ವೀಕ್ಷಿಸುವಾಗ ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಮಾಲ್ಪಾಸ್ ಅವರಿಗೆ ಸಾಥ್ ನೀಡಿದ್ದರು. ಮಾಲ್ಪಾಸ್, ಅಕ್ಟೋಬರ್ 28ರಂದು ಕೆವಾಡಿಯಾ ಬಳಿ ಟೆಂಟ್ ಸಿಟಿಯಲ್ಲಿ ತರಬೇತಿ ನಿರತ ನಾಗರಿಕಾ ಸೇವಾ ಅಧಿಕಾರಿಗಳನ್ನುದ್ದೇಶಿಸಿ “ನಾಗರಿಕ ಸೇವಕರಿಗೆ ಸಾಮರ್ಥ್ಯ ವೃದ್ಧಿ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.