ದಸರಾ ಆನೆಗಳಿಗೆ ಬೀಳ್ಕೊಡುಗೆ

ದಸರಾ ಆನೆಗಳಿಗೆ ಬೀಳ್ಕೊಡುಗೆ

ಶಿವಮೊಗ್ಗ, ಅ. 10 : ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆನೆಗಳಿಗೆ ಬುಧವಾರ ನಗರದಲ್ಲಿ ಬೀಳ್ಕೊಡುಗೆ ನೀಡಲಾಯಿತ್ತು. ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮಹಾನಗರ ಪಾಲಿಕೆ ವತಿಯಿಂದ ಗೌರವಿಸಲಾಯಿತ್ತು. ಹಳೇ ಕಾರಾಗೃಹ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನಸಾಗರದ ನಡುವೆ ಬನ್ನಿ ಮುಡಿಯುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಇದಕ್ಕೂ ಮೊದಲು ನಡೆದ ವೈಭವದ ಅಂಬಾರಿ ಮೆರವಣಿಗೆಗೆ ಸಮೀಪದ ಸಕ್ರೆಬೈಲು ಆನೆ ಬಿಡಾರದಿಂದ ಕರೆತರಲಾಗಿದ್ದ… ಆನೆಗಳು ಮೆರುಗು ತಂದಿದ್ದವು…. ಈ ವೇಳೆ ಮಾತನಾಡಿದ ಉಪಮೇಯರ್ ಎಸ್.ಎನ್. ಚನ್ನಬಸಪ್ಪ ಅವರು, ಮೇಯರ್ ಲತಾ ಗಣೇಶ್ ನೇತೃತ್ವದಲ್ಲಿ ಹಾಗೂ ನಗರದ ನಾಗರಿಕರ… ಹಾಗೂ ನಗರದ ನಾಗರಿಕರ ಸಹಕಾರದಲ್ಲಿ ಶಿವಮೊಗ್ಗ ದಸರಾ ಉತ್ಸವ ಯಶಸ್ವಿಯಾಗಿ ನೆರವೇರಿದೆ…. ಳೀಯ ಸಾಂಸ್ಕೃತಿಕ ಕಲಾ ತಂಡಗಳು ಸೇರಿದಂತೆ ಎಲ್ಲರೂ ಉತ್ಸವದ ಯಶಸ್ವಿಗೆ ಕಾರಣರಾಗಿದ್ದಾರೆ. 10 ದಿನಗಳ ಕಾಲ ಸಾಂಸ್ಕೃತಿಕ ದಸರಾ, ಮಹಿಳಾ ದಸರಾ, ಯುವ ದಸರಾ ಸೇರಿದಂತೆ 12 ದಸರಾ ಚಟುವಟಿಕೆಗಳಲ್ಲಿ 4500ಕ್ಕೂ ಅಧಿಕ ಕಲಾ… ಭಾಗವಹಿಸಿದ್ದು ವಿಶೇಷ ಎಂದು ತಿಳಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಹಕಾರ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos