ಮಂಡ್ಯ, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಚುನಾವಣಾ ಪ್ರಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಬ್ಯುಸಿಯಾಗಿದ್ದಾರೆ. ದರ್ಶನ್ ಅಭಿಮಾನಿಗಳು ಮಾತ್ರ ತಮ್ಮ ಪ್ರೀತಿಯ ನಟನಿಗೆ ಅಕ್ಷಯವಾದ ಪ್ರೀತಿ ತೋರಿಸುತ್ತಾನೆ ಇದ್ದಾರೆ. ಪ್ರಚಾರದಲ್ಲಿ ತೊಡಗಿದ್ದ ದರ್ಶನ್ ಮೇಲೆ ಪುಷ್ಪವೃಷ್ಟಿಯನ್ನೇ ಸುರಿಸಿದರು.
ಪ್ರೀತಿಯ ನಟನಿಗಾಗಿ ಅಭಿಮಾನಿಗಳು ಸೂಪರ್ ಆಗಿರೋ ಸಾಂಗ್ವೊಂದನ್ನ ರೆಡಿ ಮಾಡಿಕೊಂಡಿದ್ದಾರೆ.
‘ಕಲಾ ಕೇಸರಿ ಅನ್ನೋ’ಭರ್ಜರಿ ಹಾಡು ದರ್ಶನ್ಗಾಗಿ ರೆಡಿಯಾಗಿದ್ದು ಇಂದು ಸಂಜೆಗೆ ಆನಂದ್ ಆಡಿಯೋದಲ್ಲಿ ಮಂಡ್ಯ ಚುನಾವಣಾ ಪ್ರಚಾರದಲ್ಲಿ ಬಿಡುಗಡೆಯಾಗಲಿದೆ. ಹಾಡಿಗೆ ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದು, ಬಾಹುಬಲಿ ಸಿನಿಮಾ ಖ್ಯಾತಿಯ’ ಕಲಾಭೈರವ’ ಕಂಠದಲ್ಲಿ ಹಾಡು ಮೂಡಿಬರಲಿದೆ. ಇನ್ನು ವೈಶಾಕ್ ಶಶಿಧರನ್ ಸಂಗೀತ ಈ ಹಾಡಿಗಿದೆ.