ಮಂಡ್ಯ, ಮಾ. 29, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರು, ಸಿನಿಮಾದಲ್ಲಿ ಡೈಲಾಗ್ ಹೊಡೆದ ಹಾಗಲ್ಲ ರಾಜಕೀಯ ಅಲ್ಲ ಅಂತ, ನಟ ಯಶ್ ಹಾಗೂ ದರ್ಶನ್ ಅವರಿಗೆ ಟಾಂಗ್ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿಯವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ನಾನು ಕೂಡ ಚಿತ್ರರಂಗದಿಂದ ಬಂದವನು. ಸಿನಿಮಾದಲ್ಲಿ ಡೈಲಾಗ್ ಬರೆಸಿಕೊಂಡ ರೀತಿಯಲ್ಲಿ ರಾಜಕೀಯ ನಡೆಯುವುದಿಲ್ಲ, ಎಲ್ಲೋ ನಿಂತು ಕೊಂಡು ಡೈಲಾಗ್ ಹೊಡೆದರೆ ಅದು ರಾಜಕೀಯದಲ್ಲಿ ನಡೆಯುವುದಿಲ್ಲ ಅಂತ ಹೇಳಿದರು.