ದರ್ಶನ್ ಗೆ ಟಾಂಗ್ ಕೊಟ್ಟ ಜೆಡಿಎಸ್ ನಾಯಕ.!

ದರ್ಶನ್ ಗೆ ಟಾಂಗ್ ಕೊಟ್ಟ ಜೆಡಿಎಸ್ ನಾಯಕ.!

ಬೆಂಗಳೂರು, ಏ. 29, ನ್ಯೂಸ್ ಎಕ್ಸ್ ಪ್ರೆಸ್: ಮೊನ್ನೆ ಮೊನ್ನೆಯಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರಿಗೆ ಸಾಲಮನ್ನಾ ಬೇಡ, ಕನಿಷ್ಟ ಬೆಂಬಲ ಬೆಲೆ ಆದರೂ ಕೊಡಿ. ಆಗ ಅವರ ಸಾಲವನ್ನು ಅವರೇ ತೀರಿಸಿಕೊಳ್ಳುತ್ತಾರೆ ಎಂದಿದ್ದರು. ಈ ಹೇಳಿಕೆಯನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಖಂಡಿಸಿದ್ದಾರೆ.

ಇನ್ನೂ ಮಂಡ್ಯದ ಸಂಸದ ಶಿವರಾಮೇ ಗೌಡ ರು ಕೂಡ ದರ್ಶನ್ ಮುಖ್ಯಮಂತ್ರಿಗೆ ಟಾಂಗ್ ಕೊಡಲು ಹೋಗಿ ನಗೆ ಪಾಟಲಿಗೆ ಸಿಲುಕಿದ್ದಾರೆ ಎಂಬ ವ್ಯಂಗ ಮಾತುಗಳನ್ನು ಆಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಇಡೀ ರಾಜ್ಯದ ರೈತ ಮುಖಂಡರ ಪರವಾಗಿ ಕೋಡಿಹಳ್ಳಿ ಚಂದ್ರಶೇಖರ್ ಕೇಳುತ್ತಿದ್ದಾರೆ. ಆದ್ದರಿಂದ ಸಿನಿಮಾ ನಟರು ಕಾಲೇಜಿಗೆ ಹೋದರೆ ಕಾಲೇಜಿನ ವಿಚಾರವನ್ನು ಮಾತ್ರ ಮಾತನಾಡಬೇಕು. ಸುಮ್ಮನೆ ಚಪ್ಪಾಳೆ ಗಿಟ್ಟಿಸಿಸೋದಕ್ಕೆ ಮುಖಮಂತ್ರಿಗೆ ಟಾಂಗ್ ಕೊಡುವ ರೀತಿ ಬಣ್ಣದ ಮಾತುಗಳನ್ನು ಆಡುವುದು ವ್ಯಂಗ್ಯವಾಗಿ ಇರುತ್ತದೆ ಎಂದರು.   ಮೊದಲು ರಾಜಕೀಯಕ್ಕೆ ಬರಬೇಕು ನಂತರ ಅಲ್ಲಿನ ಕಷ್ಟ ಸುಖ ತಿಳಿಯಬೇಕ. ಆಮೇಲೆ ಮಾತನಾಡಬೆಕು ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos