ದಾಬಸ್ ಪೇಟೆ, ಜು. 15 : ಮಕ್ಕಳು ವಿವಿಧ ಬಗೆಯ ತರಕಾರಿಗಳನ್ನು ತಂದಿದ್ದರು ಉತ್ತಮ ಆರೋಗ್ಯಕ್ಕೆ ತರಕಾರಿಗಳ ಸೇವನೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಶಿಕ್ಷಕರ ಮಕ್ಕಳಿಗೆ ತಿಳಿಸಿದರು.
ಸಾಲಾಗಿ ಜೋಡಿಸಿದ ತರಕಾರಿಗಳು. ಇಂತಹ ತರಹೇರಿವಾರಿ ತರಕಾರಿಗಳನ್ನು ಕೂತುಹಲದಿಂದ ವೀಕ್ಷಿಸಿದ ಮಕ್ಕಳು. ಇಂದು ಕಂಡು ಬಂದದ್ದು ಹೊನ್ನಮ್ಮ ಗವಿಮಠದ ಶಿವಗಂಗಾ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ತರಕಾರಿ ಮೇಳ. ಮುಖ್ಯ ಶಿಕ್ಷಕರ ಎಸ್. ಸಿದ್ಧಲಿಂಗ ಸ್ವಾಮಿ, ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಹಣ್ಣು ಮತ್ತು ತರಕಾರಿ ದಿನವನ್ನು ಆಚರಿಸುತ್ತೇವೆ. ಮಕ್ಕಳ ಓದು ಹಾಗೂ ಆಟದ ಮಧ್ಯ ತರಕಾರಿಗಳ ಹೆಸರುಗಳೇ ಗೊತ್ತಿಲ್ಲ. ಅದನ್ನು ನನಪಿಸುವ ಹಾಗೂ ಪರಿಚಯಿಸುವ ದೃಷ್ಟಿಯಿಂದ ಕಾರ್ಯಕ್ರಮವನ್ನು ಆಯೋಜಿಸಿದ್ಧೇವೆ ಎಂದು ಹೇಳಿದರು.