ಡಿ.ಕೆ.ಶಿವಕುಮಾರ್ ಅವರಿಗೆ ಶ್ರೀನಿವಾಸ ಪೂಜಾರಿ ಸವಾಲ್

ಡಿ.ಕೆ.ಶಿವಕುಮಾರ್ ಅವರಿಗೆ ಶ್ರೀನಿವಾಸ ಪೂಜಾರಿ ಸವಾಲ್

ಹುಬ್ಬಳ್ಳಿ, ಮೇ. 11, ನ್ಯೂಸ್ ಎಕ್ಸ್ ಪ್ರೆಸ್: ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಈ ಬಾರಿ ಕುಂದಗೋಳ ಪಚುನಾವಣೆಯಲ್ಲಿ ಹಣ ಬಲವೋ, ಜನ ಬಲವೋ , ನೋಡೆ ಬಿಡುತ್ತೇವೆ ಎಂದು ಸವಾಲೊಂದನ್ನು ಹಾಕಿದ್ದಾರೆ.

ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಪರ ಪ್ರಚಾರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಸಚಿವ ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರದ ಉಸ್ತುವಾರಿ ವಹಿಸಿ ಹಣ ಹಂಚುತ್ತಿದ್ದಾರೆ. ನಾವು ನೋಡಿಯೇ ಬಿಡುತ್ತೇವೆ. ಡಿ.ಕೆ.ಶಿವಕುಮಾರ್ ಅವರ ಹಣ ಬಲ ಗೆಲ್ಲುತ್ತದೋ, ಚಿಕ್ಕನ ಗೌಡ್ರ ಜನ ಬಲ ಗೆಲ್ಲುತ್ತದೋ ಎಂದರು.

ಆಡಳಿತ ಪಕ್ಷದ ಶಾಸಕರಲ್ಲೇ ಈ ದರಿದ್ರ ಸರ್ಕಾರ ಹೊದರೆ ಸಾಕು ಅಂತಾ ಇದೆ. ನಾವೇನು ಆಪರೇಷನ್ ಕಮಲವಾಗಲಿ ಏನನ್ನೂ ಮಾಡುತ್ತಿಲ್ಲ. ಎಲ್ಲವನ್ನ ಗಮನಿಸಿದರೆ ಭಾರತೀಯ ಜನತಾ ಪಕ್ಷದ ಸರ್ಕಾರ ಅಸ್ಥಿತ್ವಕ್ಕೆ ಬರುವುದು ಖಚಿತ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos