ಬೆಂಗಳೂರು, ನ. 22: ನಾವು ಆರೋಗ್ಯವಾಗಿ ಇರಬೇಕು ಅಂದರೆ ಸಾಕಷ್ಟು ರೀತಿಯ ಆಹಾರ ಮತ್ತು ಹಣ್ಣುಗಳ ಮೊರೆ ಹೋಗುತ್ತೆವೆ.. ಅಂತಹ ಹಣ್ಣುಗಳಲ್ಲಿ ಕರ್ಜೂರ ಕೂಡ ಒಂದು.. ಕರ್ಜೂರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಉತ್ತುತ್ತಿ ಹಣ್ಣು ಎಂದು ಕರೆಯುವ ಈ ಹಣ್ಣು ನೂರಾರು ವರ್ಷಗಳಿಂದ ನಮ್ಮ ಹಿರಿಯರು ಈ ಹಣ್ಣನ್ನು ತಿನ್ನುತ್ತಿದ್ದಾರೆ.
1 ಕೇವಲ ಮೂರು ಕರ್ಜೂರವನ್ನು ಪ್ರತಿದಿನ ತಿನ್ನುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ನಮ್ಮ ದೇಹ ಸೇರುತ್ತದೆ.
2 ಕರ್ಜೂರವು ನೈಸರ್ಗಿಕವಾಗಿ ಸಿಹಿಯಂಶ ಹೊಂದಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
3 ಒಂದು ವಾರಗಳ ಕಾಲ ಪ್ರತಿದಿನ ಮೂರು ಕರ್ಜೂರ ತಿನ್ನುವುದರಿಂದ ಮೂಳೆಗಳು ಬಲ ಪಡೆಯುತ್ತವೆ.
4 ರಕ್ತದ ಹೀನತೆ ಯಿಂದ ಬಳಲುತ್ತಾ ಇರುವವರು ಪ್ರತಿದಿನ ನಾಲ್ಕು ಖರ್ಜೂರ ತಿಂದರೆ ಸಮಸ್ಯೆ ದೂರ ಆಗುತ್ತದೆ.
5 ದೇಹದ ತೂಕದಲ್ಲಿ ಸಮತೋಲನ ಸಿಗಬೇಕು ಎಂದರೆ ದಿನಕ್ಕೆ 3 ಕರ್ಜೂರ ತಿನ್ನಬೇಕು
6 ನೀರಿನಲ್ಲಿ ನೆನೆಸಿ ಬೆಳಗ್ಗೆ ಪ್ರತಿದಿನ ಕರ್ಜೂರವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹೃದಯಾಘಾತ ಆಗುವ ಸಮಸ್ಯೆ ದೂರ ಆಗುತ್ತದೆ.
ಸತತ ಒಂದು ವಾರಗಳ ಕಾಲ ಪ್ರತಿದಿನ ಮೂರು ಕರ್ಜೂರ ತಿನ್ನುವುದರಿಂದ ಮೂಳೆಗಳು ಬಲ ಪಡೆಯುತ್ತವೆ.ಇದರಲ್ಲಿರುವ ನೈಸರ್ಗಿಕ ಸಕ್ಕರೆ ಅಂಶವು ದೇಹಕ್ಕೆ ಶಕ್ತಿ ನೀಡುತ್ತದೆ. ಫೈಬರ್ ಅಂಶವಿರುವುದರಿಂದ ದಿನವಿಡಿ ಉತ್ಸಾಹದಿಂದಿರಲು ನೆರವಾಗುತ್ತದೆ. ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ.ಕರ್ಜೂರ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ನಿಯಮಿತವಾಗಿ ಇದನ್ನು ತಿನ್ನುವುದರಿಂದ ಅಜೀರ್ಣ ಕಾಡುವುದಿಲ್ಲ. ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಾಡುವುದಿಲ್ಲ.