ಕಾರು ಆಂಬುಲೆನ್ಸ್ ಮೇಲೆ ಹರಿದು ನಾಲ್ವರು ಮೃತ

ಕಾರು ಆಂಬುಲೆನ್ಸ್ ಮೇಲೆ ಹರಿದು ನಾಲ್ವರು ಮೃತ

ಹೈದ್ರಾಬಾದ್: ಕಾರು ಆಂಬುಲೆನ್ಸ್ ಮೇಲೆ ಹರಿದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಗಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದೆ.
7 ಮಂದಿ ಆಂಬುಲೆನ್ಸ್‌ನಲ್ಲಿ ಎಳ್ಳೂರಿನಿಂದ ಹೈದ್ರಾಬಾದ್‌ಗೆ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಕಾರು ನಿಯಂತ್ರಣ ತಪ್ಪಿ ಆಂಬುಲೆನ್ಸ್‌ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ವೆಂಕಟೇಶ್ವರ ರಾವ್ ಮತ್ತು ಪತ್ನಿ ಸುಬ್ಬಲಕ್ಷ್ಮೀ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಶಿವರಾವ್ ಅವರ ಸಹೋದರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos