ಚಿಕ್ಕಮಗಳೂರು, ಮಾ.29, ನ್ಯೂಸ್ ಎಕ್ಸ್ ಪ್ರೆಸ್: ಐಟಿ ರೇಡ್ ಆಗುತ್ತದೆ ಎಂಬ ಇಂಟೆಲಿಜೆನ್ಸ್ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಮೂಲಕ ಮುಖ್ಯಮಂತ್ರಿಗಳು ಗೌಪ್ಯತೆಯ ಪ್ರಮಾಣವಚನಕ್ಕೆ ಧಕ್ಕೆ ತಂದಿದ್ದಾರೆ ಎಂದು ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಐಟಿ ದಾಳಿಗೂ ಮುನ್ನವೇ ಸಾರ್ವಜನಿಕವಾಗಿ ದಾಳಿ ನಡೆಯುವುದನ್ನು ಹೇಳಿದ್ದಾರೆ. ಈ ಮೂಲಕ ಭ್ರಷ್ಟರು ತಮ್ಮ ಭ್ರಷ್ಟತೆಯನ್ನು ಮುಚ್ಚಿ ಹಾಕಲು ನೆರವಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.