ಬೆಂಗಳೂರು: ಕುಮಾರಸ್ವಾಮಿಯವರ ಹೇಳಿಕೆಯನ್ನು ಮತ್ತೊಂದು ಕಡೆ ಸಿಟಿ ರವಿ ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಮರ ಕಡಿಹಿಸಿ ಅಕ್ರಮವಾಗಿ ವಿಕ್ರಮ ಸಿಂಹ ತೋಟದಲ್ಲಿ ಹಾಕಿಸಿದ್ದಾರೆ. ಕುಮಾರಸ್ವಾಮಿ ಹೇಳಿಕೆಗೆ ಸಿಟಿ ರವಿ ಸಮರ್ಥನೆ ನೀಡಿದ್ದಾರೆ. ಎಚ್ಡಿಕೆ ಆರೋಪ ಮಾಡುವ ಮುನ್ನ ಬಲವಾದ ಆಧಾರ ಇದೆ ಅಂತ ಭಾವಿಸಿದ್ದೇನೆ. ಭದ್ರಾವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಾಗುವಾನಿ ಮರಗಳ ಮಾರಣಹೋಮ ಆಗಿದೆ. ನೂರಕ್ಕೂ ಹೆಚ್ಚು ಮರಗಳನ್ನು ಕತ್ತರಿಸಿ ರಾಜಕೀಯ ನಾಯಕರು ಅಧಿಕಾರಿಗಳ ಮನೆಗೆ ಸಾಗಿಸಿದ್ದಾರೆ. ಈ ಬಗ್ಗೆ ಸ್ಥಳೀಯರಿಂದ ಈ ಮಾಹಿತಿ ಬಂದಿದೆ ಎಂದು ಸಿಟಿ ರವಿ ಅವರು ಹೇಳುತ್ತಿದ್ದಾರೆ.