ಮೊಸಳೆ ಪ್ರತ್ಯಕ್ಷ

ಮೊಸಳೆ ಪ್ರತ್ಯಕ್ಷ

ರಾಯಚೂರು, ಜ. 10 : ಕೃಷ್ಣಾ ನದಿಯ ತಟದಲ್ಲಿನ ಗ್ರಾಮವೊಂದರಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಸೃಷ್ಠಿಸಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನರಕಲದಿನ್ನಿ ಗ್ರಾಮದಲ್ಲಿ ಬೃಹತ್ ಆಕಾರದ ಮೊಸಳೆ ಪತ್ಯಕ್ಷವಾಗಿದ್ದು, ತಡ ರಾತ್ರಿ ಗ್ರಾಮದೊಳಗೆ ಮೊಸಳೆ ನುಗ್ಗಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮ ಕೃಷ್ಣಾ ನದಿ ಹತ್ತಿರವಿರುವದುದರಿಂದ ಮೊಸಳೆ ಗ್ರಾಮದೊಳಗೆ ನುಗ್ಗಿದೆ ಎನ್ನಲಾಗುತ್ತಿದೆ. ಇದುವರೆಗೆ ಮೊಸಳೆಯಿಂದ ಯಾರಿಗೆ ಯಾವುದೇ ಜೀವಕ್ಕೆ ತೊಂದರೆ ನೀಡಿಲ್ಲವಾದರೂ, ಬೃಹತ್ ಆಕಾರದಲ್ಲಿರುವ ಮೊಸಳೆ ಏನಾದರೂ ಮಾಡಬಹುದು ಎನ್ನುವ ಆತಂಕವಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆಯನ್ನ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos