ನವದೆಹಲಿ, ಏ. 1, ನ್ಯೂಸ್ ಎಕ್ಸ್ ಪ್ರೆಸ್: ತಂದೆಯನ್ನು ಮಗನ ಎದುರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿ ಉಸ್ಮಾನ್ಪುರದಲ್ಲಿ ನಡೆದಿದೆ. 40 ವರ್ಷದ ಅಕಿಬುದ್ದೀನ್ ಸಾರಿಗೆ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿದ್ದರು, ರಾತ್ರಿ 11.45ರ ಸುಮಾರಿಗೆ ಅವರ ಮಗ ಹಾಗೂ ಸಹೋದರಿಯೊಂದಿಗೆ ಮನೆಗೆ ತೆರಳುವಾಗ ಘಟನೆ ನಡೆದಿದೆ.
ಏಕಾಏಕಿ ಬಂದ ದುಷ್ಕರ್ಮಿಗಳು ಸಾಕಷ್ಟು ಬಾರಿ ಅಕಿಬುದ್ದೀನ್ ಮೇಲೆ ಗುಂಡು ಹಾರಿಸಿದ್ದಾರೆ. ಇದನ್ನು ನೋಡಿ ಗಾಬರಿಗೊಂಡ ಮಗ ಓಡಿ ಮನೆಗೆ ಹೋಗಿ ವಿಷಯ ತಿಳಿಸಿದ್ದಾನೆ.
ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ 5 ಜನ ದುಷ್ಕರ್ಮಿಗಳು ಅಕಿಬಿದ್ದೀನ್ ಮೇಲೆ ದಾಳಿ ನಡೆಸಿದ್ದರು. ದ್ವೇಷದಿಂದಲೇ ಈ ರೀತಿ ಮಾಡಿದ್ದಾರೆ ಹಾಗೂ ಆ ಕೊಲೆಗಾರರು ಯಾರು ಎಂದು ನಮಗೆ ಗೊತ್ತಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.