ವಿಜಯಪುರ, ಆ. 1 : ಮಗಳ ಪ್ರೀತಿಗೆ ವಿರೋಧಿಸಿ ತಂದೆ ಸಿಟ್ಟಿನಲ್ಲಿ ಮಗಳನ್ನು ಮನೆಯ ಮರ್ಯಾದೆ ಕಳೆಯುತ್ತಿದ್ದಿಯಾ ಎಂದು ಮನೆಯ ಹೊರಗಡೆ ಕರೆತಂದು ಮಾರಕಾಸ್ತ್ರಗಳಿಂದ ಇರಿದಿದ್ದಾನೆ. ಇರಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ.
ಶಂಕರ್ ಚವ್ಹಾಣ್ ಮಗಳಿಗೆ ಇರಿದ ತಂದೆ. ಸಂಬಂಧದಲ್ಲಿ ಕರಿಷ್ಮಾಳಾ ಅಣ್ಣನ ಮಗ ಅರುಣ್ ಜೊತೆ ಕರಿಷ್ಮಾಳ ಪ್ರೇಮ ನಡೆದಿತ್ತು. ಎರಡು ಕುಟುಂಬದವರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಿದರು ಇದಕ್ಕೆ ಕ್ಯಾರೇ ಅನ್ನದ ಇಬ್ಬರು ಮತ್ತೆ ಕದ್ದು ಕದ್ದು ಭೇಟಿ ಆಗುತ್ತಿದ್ದರು. ಇದನ್ನು ಕಂಡ ತಂದೆ ಮಗಳನ್ನು ಮನೆಯಿಂದ ಹೊರಗೆ ಕರೆತಂದು ಮಾರಕಾಸ್ತ್ರಗಳಿಂದ ಇರಿದ್ದಾನೆ. ಕರೀಷ್ಮಾಳನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಹೊರ್ತಿ ಪೊಲೀಸರು ಆರೋಪಿ ಶಂಕರ್ ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.