ಮೈಸೂರು, ಆ. 1: ರಾತ್ರೋರಾತ್ರಿ ಟೆಂಪೋದಲ್ಲಿ ಕರುಗಳ ಸಾಗಣ್ಣಿ ಕೆಯಾಗುತ್ತಿದ್ದು, 20 ಕರುಗಳನ್ನ ರಕ್ಷಣೆಮಾಡಲಾಗಿದೆ. ಈ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ಪಟ್ಟಣದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಸರತ್ತು ಮಾಡಿದ್ದಾರೆ. ಕರುಗಳನ್ನ ಸಾಗಿಸುತ್ತಿದ್ದ ವಾಹನ ವಶ ಪಡಿಸಿಕೊಂಡಿದ್ದಾರೆ. ಪೊಲೀಸ್ ದಾಳಿ ನಡೆಸುವ ವೇಳೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಉಸಿರುಗಟ್ಟಿಸುವ ರೀತಿ ಕರುಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.